ಜು.7ಕ್ಕೆ ‘ಶತಭಿಷ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ವೆಂಕಟೇಶ್ ಅವರ ನಿರ್ದೇಶನದ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಶತಭಿಷ’ ಚಿತ್ರ. ಚಿತ್ರದಲ್ಲಿ ಶೋಬಿತಾ ಶಿವಣ್ಣ ಮತ್ತು ಹೀರೋ ಆಗಿ ದೀಪು ಅರ್ಜುನ್ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಗೇ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಬ್ರಹ್ಮಗಂಟು’, ‘ನಿನ್ನಿಂದಲೇ’ ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಶೋಭಿತಾ ಶಿವಣ್ಣ, ‘ವಂದನಾ’, ‘ಅಟೆಂಪ್ಟ್‌ ಟು ಮರ್ಡರ್‌’, ‘ಜಾಕ್‌ಪಾಟ್’ ಸಿನಿಮಾಗಳ ಮೂಲಕ ಹಿರಿತೆರೆಗೂ ಕಾಲಿಟ್ಟಿದ್ದರು. ಇದೀಗ ಅವರ ಹೊಸ ಸಿನಿಮಾ ‘ಶತಭಿಷ’ ಚಿತ್ರ.

ವಿರಾಜಪೇಟೆ, ಮೇಲುಕೋಟೆ, ಹುಬ್ಬಳ್ಳಿ, ಮುಂಬೈ, ಗುಲ್ಬರ್ಗಾ, ಬೆಂಗಳೂರು, ಚಿಂತಾಮಣಿ ಅಲ್ಲದೆ ತಮಿಳುನಾಡಿನ ಕೆಲವೆಡೆ ಸೇರಿ ಸಾಕಷ್ಟು ಲೊಕೇಶನ್‌ಗಳಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ.

ಒಂದು ವಿಭಿನ್ನ ಶೈಲಿಯ ಕಳ್ಳ ಪೋಲೀಸ್ ಆಟವನ್ನು ನಿರ್ದೇಶಕ ವೆಂಕಟೇಶ್ ಅವರು ಈ ಚಿತ್ರದ ಮೂಲಕ ಹೇಳು ಹೊರಟಿದ್ದೆನೆ ಎಂದು ‘ಬಿಸಿನಿಮಾಸ್’ ತಂಡದೊಂದಿಗೆ ಮಾತನಾಡಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ವೆಂಕಟೇಶ್, ‘ನಾಲ್ವರು ಪೋಲಿ ಹುಡುಗರ ಕಥೆಯಿದು. ಭಯೋತ್ಪಾದಕರಿಗೆ ಬೆಂಬಲ ನೀಡಲು ಹೋಗಿ ಪೊಲೀಸ್ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ನಂತರ ಅವರು ಆ ಕೇಸ್‌ನಿಂದ ಹೊರಗೆ ಬರುತ್ತಾರಾ? ಈ ಕೇಸ್‌ಗೆ ಅವರು ಸಿಲುಕುವುದು ಹೇಗೆ ಎಂಬುದೇ ಚಿತ್ರದ ಕಥೆ. ಈ ಚಿತ್ರದಲ್ಲಿ ಮೂರು ಹಾಡುಗಳಿವೆ. ಜೊತೆಗೆ ನಾಲ್ಕು ಫೈಟ್‌ಗಳಿದ್ದು, ಅಭಿಷೇಕ್ ರಾಯ್ ಅವರು ಸಂಗೀತ ನೀಡಿದ್ದಾರೆ. ಆರ್. ಸೆಲ್ವರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ’ ಎಂದರು.

ಚಿತ್ರದ ಬಗ್ಗೆ ಮಾಹಿತಿ ನೀಡುವ ಹೀರೋ ದೀಪು ಅರ್ಜುನ್, ‘ಕಿತಾಪತಿ ಮಾಡುವುದೇ ನನ್ನ ಕೆಲಸವಾಗಿರುತ್ತೆ, ‌ಒಂದು ರೀತಿಯ ಕಳ್ಳ ಪೋಲೀಸ್ ಆಟ ಎನ್ನಬಹುದು. ನಂತರ ನಾಯಕಿಯ ಪರಿಚಯವಾಗಿ, ಪರಿಚಯ ಪ್ರೀತಿಯಾಗುತ್ತದೆ.. ಮುಂದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂದರು.

ನಿರ್ಮಾಪಕ ಕಾಶಿ ಶೇಖರ್  ನಿರ್ಮಾಣದ ಜೊತೆಗೆ ಪೊಲೀಸ್ ಅಧಿಕಾರಿಯಾಗಿಯೂ ಅವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಉಳಿದ ಪಾತ್ರಗಳಲ್ಲಿ ಟೆನ್ನಿಸ್ ಕೃಷ್ಣ, ಅಪ್ಪಣ್ಣ, ಮೂಗು ಸುರೇಶ್, ಕುರಿ ಸುನೀಲ್ ಮುಂತಾದವರು ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!