ದುಃಖದಲ್ಲಿ ಮುಳುಗಿದ ಶಾರುಖ್ ಕುಟುಂಬ

ಬಾಲಿವುಡ್ ಕಿಂಗ್ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ದುಃಖದಲ್ಲಿ ಮುಳುಗಿದ್ದು, ತಾಯಿ ಗೌರಿ ಖಾನ್ ಆರ್ಯನ್ ಮನೆಗೆ ಬರುವವರೆಗೂ ಯಾವುದೇ ತರಹದ ಸಿಹಿ ತಿನಿಸು ಮಾಡದಂತೆ ಆಳುಗಳಿಗೆ ಸೂಚಿಸಿದ ಮಾಹಿತಿ ಲಭಿಸಿದೆ.

ದಸರಾ ಸಂದರ್ಭದಲ್ಲಿ ಮನೆಯಲ್ಲಿ ಊಟದ ಜೊತೆ ಸಿಹಿ ತಿಂಡಿಯನ್ನು ಮಾಡಲಾಗಿತ್ತು. ಇದನ್ನು ಗಮನಿಸಿದ ಗೌರಿ ಖಾನ್, ಆರ್ಯನ್ ಮನೆಗೆ ಬರುವವರೆಗೆ ಸಿಹಿ ತಿನಿಸು ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆರ್ಯನ್ ಬಂಧನದಿಂದ ಶಾರುಖ್ ನಿವಾಸ ಮನ್ನತ್‌ನಲ್ಲಿ ಯಾರಿಗೂ ಯಾವ ಹಬ್ಬವನ್ನು ಆಚರಿಸುವ ಮನಸ್ಸು ಇಲ್ಲವಾಗಿದೆ. ಮಗ ಬಿಡುಗಡೆ ಆಗಿ ದೀಪಾವಳಿ ವೇಳೆ ಮನೆಯಲ್ಲಿ ಬೆಳಕು ಪಸರಿಸಲಿ ಎಂದು ಮನೆಮಂದಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಡ್ರಗ್ ಪಾರ್ಟಿಯಲ್ಲಿ ಭಾಗಿ ಆಗಿರುವ ಸಂಬಂಧ ಆರ್ಯನ್ ಖಾನ್ ಜೈಲು ಸೇರಿದ್ದು ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 20ಕ್ಕೆ ನಡೆಯಲಿದೆ. ಮಗನನ್ನು ಜೈಲಿನಿಂದ ಹೊರ ತರಲು ಶಾರುಖ್ ಖಾನ್ ಈಗಾಗಲೇ ಹೆಸರಾಂತ ವಕೀಲರ ಸಹಾಯ ಪಡೆದಿದ್ದಾರೆ. ಆರ್ಯನ್ ಬಿಡುಗಡೆ ಆದರಷ್ಟೇ ದೀಪಾವಳಿ ಹಬ್ಬದ ಸಂಭ್ರಮ ಶಾರುಖ್ ಮನೆಯಲ್ಲಿ ಕಂಡು ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!