‘ಬಿಚ್ಚುಗತ್ತಿ’ ವಿಶೇಷ ಟೈಗರ್ ಟೀಸರ್

‘ಬಿಚ್ಚುಗತ್ತಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಟೈಗರ್ ಟೀಸರ್ ಬಿಡುಗಡೆ ಇತ್ತೀಚೆಗೆ ನೆರವೇರಿತು. ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಈ ಕಾಲದಲ್ಲಿ ಈ ಚಿತ್ರ ತಂದದ್ದಕ್ಕೆ ನಿರ್ದೇಶಕ ಸಂತು ಹಾಗೂ ನಿರ್ಮಾಪಕರನ್ನು ಮೆಚ್ಚಬೇಕು ಎಂದರು.
ನಿರ್ದೇಶಕ ಸಂತು ಅವರು ಮಾತನಾಡುತ್ತಾ, ಕಡಿಮೆ ಬಜೆಟ್ಟಿನಲ್ಲಿ ತುಂಬಾ ನೈಜವಾಗಿ ಕಂಡು ಬರುವ ಹುಲಿಗೆ ಎಲ್ಲಾ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.ಮಲಯಾಳಂನ ‘ಪುಲಿಮುರುಗನ್’ ಸಿನಿಮಾ ಕ್ಕೆ ಹೈದರಾಬಾದ್ ನ ತಾಂತ್ರಿಕ ಸಂಸ್ಥೆಯೊಂದು ಈ ಚಿತ್ರಕ್ಕೂ ಸಿ.ಜೆ.ಮಾಡಿದೆ ಎಂದು ಹೇಳಿದರು.
ಸಿನಿಮಾದ ನಾಯಕಿ ಹರಿಪ್ರಿಯಾ ಮಾತನಾಡುತ್ತಾ, 40 ದಿನದೊಳಗೆ ಇಷ್ಟೊಂದು ಜನ, ಪ್ರಾಣಿಗಳನ್ನು ಬಳಸಿ ಸಿನಿಮಾ ಪೂರ್ತಿ ಮಾಡಿದ ನಿರ್ದೇಶಕರಿಗೆ ಅಭಿನಂದಿಸಬೇಕು,ನನಗೆ ಐತಿಹಾಸಿಕ ಪಾತ್ರ ಗಳೆಂದರೆ ಇಷ್ಟ, ಬಿಚ್ಚುಗತ್ತಿಯಲ್ಲಿ ನನಗೆ ಅಂಥದೊಂದು ಪಾತ್ರ ದೊರಕಿದ್ದು ಖುಷಿ ಇದೆ ಎಂದರು.
ರಾಜವರ್ಧನ್ ಮಾತನಾಡುತ್ತಾ, ದರ್ಶನ್ ಅವರಿಂದ ಶುರುವಾಗಿ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆ ಯ ಮಾತನ್ನು ಆಡುತ್ತಿರುವುದಕ್ಕೆ ಖುಷಿ ಇದೆ ಅಂದರು.ಹಂಸಲೇಖ ಅವರ ಒಂದು ಹಾಡು ಇದೆ. ಸಿನಿಮಾದಲ್ಲಿ ಒಟ್ಟು ಏಳು ಫೈಟ್ ಗಳಿವರ ಎಂದು ನಿರ್ದೇಶಕ ಹರಿ‌ಸಂತು ಹೇಳಿದರು. ನಕುಲ್ ಅಭಯಂಕರ್ ಅವರ ಸಂಗೀತವಿದೆ.
ಸಿನಿಮಾ ಗೆದ್ದರೂ ಸೋತರೂ ಭಾಗ 2 ಬಂದೇ ಬರುತ್ತೆ. ನಿರ್ಮಾಪಕರು ಲಾಭ ಮಾಡುವುದರ ಬಗ್ಗೆ ಯೋಚನೆ ಮಾಡದೆ ಚಿತ್ರದುರ್ಗ ದ ಬಗ್ಗೆ ಒಂದು ಒಳ್ಳೆ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಇಟ್ಟುಕೊಂಡಿದ್ದಾರೆ.
ಕಲ್ಯಾಣಿ  ಅವರು ಮಾತನಾಡುತ್ತಾ, ಬಾಹುಬಲಿ ಸಿನಿಮಾದಲ್ಲಿ ರಮ್ಯಾಕೃಷ್ಣ ಅವರ ಪಾತ್ರ ಇಷ್ಟ ಆಗಿತ್ತು. ಆ ತರಹ ಕ್ಯಾರೆಕ್ಟರ್ ಮಾಡಬೇಕು ಎಂಬ ಆಸೆ ಇತ್ತು. ಈ ಸಿನಿಮಾದಲ್ಲಿ ಈಡೇರಿದೆ ಎಂದರು. ದಳವಾಯಿ ಮುದ್ದಣನ ಪತ್ನಿ‌ಮಲ್ಲವ್ವನ ಪಾತ್ರ ಮಾಡಿರೋದಾಗಿ ಹೇಳಿದರು.
ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಸಮಾರಂಭದಲ್ಲಿ ರಮೇಶ್ ಪಂಡಿತ್, ನಾಯಕ ನಟ ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ವೇದಿಕೆಯನ್ನು ಅಲಂಕರಿಸಿದ್ದರು
Be the first to comment

Leave a Reply

Your email address will not be published. Required fields are marked *

Translate »
error: Content is protected !!