ಈ ವಾರ ತೆರೆ ಮೇಲೆ ಶ್ರೀಮುರಳಿ ‘ಭರಾಟೆ’

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ನಾಯಕಾನಾಗಿ ನಟಿಸಿರುವ, ಚೇತನ್ ಕುಮಾರ್(ಬಹದ್ದೂರ್) ನಿರ್ದೇಶನದಭರಾಟೆ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜಗದ್ಗುರು ಮೂವೀಸ್ ಲಾಂಛನದಲ್ಲಿ ಸುಪ್ರೀತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಗಿರೀಶ್ ಆರ್ ಗೌಡ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಕೆ.ರವಿವರ್ಮ, ಗಣೇಶ್, ವಿಜಯ್ ಸಾಹಸ ನಿರ್ದೇಶನ ಹಾಗೂ ಎ.ಹರ್ಷ, ಇಮ್ರಾನ್ ಮೋಹನ್, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಶ್ರೀಮುರಳಿ, ಶ್ರೀಲೀಲ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಪಿ ಶರ್ಮ, ರಂಗಾಯಣ ರಘು, ತಾರಾ, ಶೋಭ್‍ರಾಜ್, ಗಿರಿ, ರಾಜು ತಾಳಿಕೋಟೆ, ಸಾಧುಕೋಕಿಲ, ಕುರಿ ಪ್ರತಾಪ್, ಗಿರಿ, ಜೈಜಗದೀಶ್, ಕೇತನ್ ಕರಂಡೆ, ಪೆಟ್ರೋಲ್ ಪ್ರಸನ್ನ, ಧರ್ಮ, ರಾಜವಾಡೆ, ಮನಮೋಹನ್, ರಾಮ್, ಉಗ್ರಂ ಮಂಜು, ಅಶೋಕ್, ಅಮಿತ್, ಸಿಲ್ಲಿಲಲ್ಲಿ ಆನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!