‘ಬೆಂಕಿ’ ಟ್ರೈಲರ್ ಔಟ್

ಅನೀಶ್‌ ತೇಜೇಶ್ವರ್ ಅವರು ನಟಿಸಿರುವ ‘ಬೆಂಕಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ.

ರಾಮಾರ್ಜುನ ಚಿತ್ರದ ನಂತರ ಸೆಟ್ಟೇರುತ್ತಿರುವ ಅನೀಶ್‌ ಅವರ 10ನೇ ಸಿನಿಮಾ ಇದಾಗಿದೆ. ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ಮೂಲಕ ಅನೀಶ್‌ ಅವರೇ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಅಣ್ಣ ತಂಗಿ ಸೆಂಟಿಮೆಂಟ್‌ ಕತೆ ಹೊಂದಿರುವ ಸಿನಿಮಾ ಇದಾಗಿದೆ. ಹಿರಿಯ ನಿರ್ದೇಶಕ ಎ.ಆರ್‌. ಬಾಬು ಪುತ್ರ ಶಾನ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ.

“ಮೊದಲಿನಿಂದಲೂ ವಿಭಿನ್ನ ಕತೆಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೆ. ಈ ಬಾರಿಯೂ ಗಡ್ಡ, ಮೀಸೆ ಬಿಟ್ಟ ನನ್ನ ಪಾತ್ರದ ಔಟ್‌ ಲುಕ್‌ ತುಂಬಾ ವಿಶೇಷವಾಗಿರುತ್ತದೆ. ಎಂದಿನಂತೆ ಮತ್ತೊಂದು ಭರವಸೆಯೊಂದಿಗೆ ಈ ಸಿನಿಮಾ ಆರಂಭಿಸಿದ್ದೇನೆ’ ಎಂದು ನಟ ಅನೀಶ್‌ ಹೇಳಿದ್ದಾರೆ.

ಅನೀಶ್‌ಗೆ ನಾಯಕಿಯಾಗಿ ‘ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ಹುಲಿವಾನ ನಟಿಸಿದ್ದಾರೆ. ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಕೊಳ್ಳೆಗಾಲ, ಹೊಸೂರು, ಬಾಗೇಪಲ್ಲಿ, ಚನ್ನರಾಯಪಟ್ಟಣ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.

ನಟಿ ಸಂಪದ ಹುಲಿವನ ಅವರು ಪ್ರೇತವಾಗಿ ನಟಿಸಿದ್ದಾರೆ. ಬೆಂಕಿ ಸಿನಿಮಾ ಕೇವಲ ಅಣ್ಣ-ತಂಗಿ ಸೆಂಟಿಮೆಂಟ್ ಮಾತ್ರವಲ್ಲ ಕಾಮಿಡಿ- ಹಾರರ್ ಸಿನಿಮಾ ಕೂಡಾ ಆಗಿದೆ ಎಂದು ಅನೀಶ್ ಹೇಳಿದ್ದಾರೆ.

ಅನೀಶ್‌​ 2010 ರಲ್ಲಿ ‘ಪೊಲೀಸ್​ ಕ್ವಾಟರ್ಸ್’​ ಸಿನಿಮಾ ಮೂಲಕ ಎಂಟ್ರಿಕೊಟ್ಟು, ‘ನಮ್​ ಏರಿಯಾಲ್ ಒಂದು ದಿನ’, ‘ಕಾಫಿ ವಿಥ್ ಮೈ ವೈಫ್’, ‘ನನ್ ಲೈಫ್​ಲ್ಲಿ’, ‘ಎಂದೆಂದೂ ನಿನಗಾಗಿ’, ‘ನೀನೆ ಬರಿ ನೀನೆ’, ‘ಅಕಿರ’, ‘ವಾಸು ನಾನ್​ ಪಕ್ಕಾ ಕಮರ್ಷಿಯಲ್’, ‘ರಾಮಾರ್ಜುನ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮಾಂಜಾ’, ಮತ್ತು ‘ಎನ್​ ಆರ್​ ಐ’ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ.

ಬೆಂಕಿಗೆ ಪ್ರೇಕ್ಷಕ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎನ್ನುವುದು ಚಿತ್ರ ಬಿಡುಗಡೆ ಆದ ಮೇಲೆ ಗೊತ್ತಾಗಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!