ಮತ್ತೆ ಬರುತ್ತಿದೆ “ಬೆಳ್ಳಿ ಕಾಲುಂಗುರ”

ಕನಸಿನ ರಾಣಿ ಮಾಲಾಶ್ರೀ, ಸುನಿಲ್ ಅಭಿನಯದ ಸಂಗೀತಮಯ ಸಿನಿಮಾ “ಬೆಳ್ಳಿ ಕಾಲುಂಗುರ” ಈಗ ಮತ್ತೆ ಅದೇ ಟೈಟಲ್ ನಲ್ಲಿ ಬೆಳ್ಳಿತೆರೆಯ ಮೇಲೆ ಬರಲು ಸಜ್ಜಾಗಿದೆ.

30 ವರ್ಷಗಳ ನಂತರ “ಬೆಳ್ಳಿ ಕಾಲುಂಗುರ” ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ. ಎಚ್. ವಾಸ್ ನಿರ್ದೇಶನದ ಧನ್ಯಾ ರಾಮ್ ಅಭಿನಯದ ಚಿತ್ರಕ್ಕೆ “ಬೆಳ್ಳಿ ಕಾಲುಂಗುರ” ಟೈಟಲ್ ನೀಡಲಾಗಿದೆ.

ಕಂಠೀರವ ಸ್ಟೂಡಿಯೋದಲ್ಲಿ ಅದ್ದೂರಿಯಾಗಿ ನಡೆದ “ಬೆಳ್ಳಿ ಕಾಲುಂಗುರ” ಚಿತ್ರದ ಮುಹೂರ್ತಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಗಮಿಸಿ ಶುಭ ಕೋರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ಳಿಕಾಲುಂಗುರ ಚಿತ್ರಕ್ಕೆ ಕ್ಲಾಪ್ ಮಾಡಿದರು. ಕ್ಯಾಮರಾ ಚಾಲನೆ ಮಾಡಿ ರಾಘವೇಂದ್ರ ರಾಜ್ ಕುಮಾರ್ ಸಿನಿಮಾಗೆ ಶುಭ ಹಾರೈಸಿದರು.

1992ರಲ್ಲಿ ಬಿಡುಗಡೆಯಾದ ಬೆಳ್ಳಿ ಕಾಲುಂಗುರ ಸಿನಿಪ್ರಿಯರ ಅಚ್ಚು ಮೆಚ್ಚಿನ ಸಿನಿಮಾಗಳಲ್ಲಿ ಒಂದು ಎನಿಸಿದೆ. ಕೆ.ವಿ ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಾಲಾಶ್ರೀ, ಸುನಿಲ್, ತಾರಾ, ಅವಿನಾಶ್, ದೊಡ್ಡಣ್ಣ, ಗಿರಿಜಾ ಲೋಕೇಶ್, ಸದಾಶಿವ ಬ್ರಹ್ಮಾವರ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!