ಆ. 20ಕ್ಕೆ ಬರುತ್ತಿದೆ ‘ಶಾರ್ದೂಲ’

ಆಗಸ್ಟ್ 20ರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಂದು ‘ಶಾರ್ದೂಲ’ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

ಹಾರರ್, ಸಸ್ಪೆನ್ಸ್ ಚಿತ್ರವಾಗಿರುವ ಶಾರ್ದೂಲ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ಯಾಂಡಮಿಕ್ ಸಮಯದಲ್ಲಿ ಈ ಚಿತ್ರ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಕೊಡುವ ಭರವಸೆಯನ್ನು ಚಿತ್ರತಂಡ ಹೊಂದಿದೆ.
ಚಿತ್ರ ಬಹುತೇಕ ಹೊಸ ಪ್ರತಿಭೆಗಳನ್ನು ಹೊಂದಿದೆ. ರಾಧಾಕಲ್ಯಾಣದ ಮೂಲಕ ಮನೆ ಮಾತಾಗಿದ್ದ ಕೃತಿಕಾ ರವೀಂದ್ರ, ಪಿಯುಸಿ ಕನ್ನಡ ಚಿತ್ರಖ್ಯಾತಿಯ ನಟ ಚೇತನ್ ಚಂದ್ರ ಈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ರವಿತೇಜ, ಐಶ್ವರ್ಯ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಕುಮಾರ್ ನವೀನ್, ಮಹೇಶ್ ಸಿದ್ದು, ಕಲ್ಯಾಣ್ ಸಿ, ರೇಣು ತಾರಾಬಳಗದಲ್ಲಿ ಇದ್ದಾರೆ.

ಚಿತ್ರದ ಟ್ರೇಲರ್ ನ್ನು ಸಾವಿರಾರು ಜನರು ನೋಡಿದ್ದು ಅವರಿಗೆ ಅಡ್ವೆಂಚರಸ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ನ ಅನುಭವ ಸಿಗುತ್ತಿದೆ. ಚಿತ್ರ ನಾಲ್ವರು ಯಂಗ್ ಸ್ಟರ್ ಗಳ ಸುತ್ತ ಸುತ್ತಿದ್ದು ಹೊಸ ಜಾಗದಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಸಿನೆಮಾ ಒಳಗೊಂಡಿದೆ.
ಚಿತ್ರಕ್ಕೆ ದೆವ್ವ ಇರಬಹುದಾ? ಎಂದು ಸಬ್ ಟೈಟಲ್ ಇಡಲಾಗಿದೆ. ಇದು ದೆವ್ವದ ಸಿನೆಮಾ ನೋಡುವವರಿಗೆ ಥ್ರಿಲ್ಲಿಂಗ್ ಅನುಭವ ನೀಡುವ ನಿರೀಕ್ಷೆ ಹೊಂದಲಾಗಿದೆ.

ಭೈರವ ಸಿನೆಮಾಸ್ ಮತ್ತು ಸಿ ವಿ ಆರ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬರುತ್ತಿರುವ ಚಿತ್ರಕ್ಕೆ ಅರವಿಂದ್ ಕೌಶಿಕ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ಸ್ಕ್ರೀನ್ ಪ್ಲೇ ಮಾಡಿದ್ದಾರೆ. ರೋಹಿತ್ ಎಸ್ ಮತ್ತು ಕಲ್ಯಾಣ್ ಸಿ ಅವರು ನಿರ್ಮಾಪಕರಾಗಿದ್ದಾರೆ.
ಚಿತ್ರಕ್ಕೆ ಸತೀಶ್ ಬಾಬು ಅವರ ಸಂಗೀತ ಇದೆ. ವೈ ಜಿ ಅರ್ ಮನು ಅವರು ಛಾಯಾಗ್ರಹಣ ಮಾಡಿದ್ದಾರೆ. ಶಿವರಾಜು ಮೇಹು ಸಂಕಲನ ಚಿತ್ರಕ್ಕಿದೆ.
ಮಾಸ್ ಮಾದ, ವೈಲೆಂಟ್ ವೇಲು, ಅಲ್ಟಿಮೇಟ್ ಶಿವು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
______________

Be the first to comment

Leave a Reply

Your email address will not be published. Required fields are marked *

Translate »
error: Content is protected !!