ಅಥಿ ಐ ಲವ್ ಯು ಚಿತ್ರತಂಡದಿಂದ ಗೋವಾ ಪ್ರವಾಸ

ರೆಡ್ ಅಂಡ್ ವೈಟ್ ಸೆವೆನ್ ರಾಜ್* ನಿರ್ಮಾಣದ ಅಥಿ ಐ ಲವ್ ಯು ಚಿತ್ರತಂಡ ಎರಡು ಟಿಕೆಟ್ ಪಡೆದು ಚಿತ್ರ ವೀಕ್ಷಣೆ ಮಾಡಿದ ದಂಪತಿಗಳಿಗೆ ಗೋವಾ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು. ಅಂತೆಯೇ ಡಿಸೆಂಬರ್ 17ರ ಸಂಜೆ ಬೆಂಗಳೂರಿನಿಂದ ಹೊರಟ ಏಳು ದಂಪತಿಗಳು ಮತ್ತು ಚಿತ್ರದ ನಟ, ನಿರ್ದೇಶಕ ಲೋಕೇಂದ್ರ ಸೂರ್ಯ ದಂಪತಿಗಳು ಹಾಗೂ ಚಿತ್ರತಂಡದವರು ಗೋವಾ ಪ್ರವಾಸಕ್ಕೆ ಹೊರಟಿದರು, ಗೋವಾ ಬೀಚ್ ಗಳು ಚರ್ಚ್, ಪೋರ್ಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಮಡಿಕೇರಿ ಮೂಲದ ನಾವು ಇಲ್ಲಿಯವರೆಗೂ ಗೋವಾ ಪ್ರವಾಸವನ್ನು ಕೈಗೊಂಡಿರಲಿಲ್ಲ, ಇದು ನಮ್ಮ ಮೊದಲ ಗೋವಾ ಟ್ರಿಪ್ ನಮ್ಮ ಜೀವಿತಕಾಲದ ಮೆಮೊರಿ ಆಗಿದೆ ಎಂದು ಚಿತ್ರತಂಡಕ್ಕೆ ತಮ್ಮ ಸಂತಸವನ್ನು ವ್ಯಕ್ತಪಡಿಸಿಕೊಂಡರು ರಶ್ಮಿ ಮತ್ತು ಬೋಪಣ್ಣ ದಂಪತಿಗಳು.

ಕನ್ನಡ ಭಾಷೆಯೇ ತಿಳಿಯದ ಉಷಾ ಮತ್ತು ಕಣ್ಣನ್ ದಂಪತಿಗಳು ಸಬ್ ಟೈಟಲ್ ಮೂಲಕ ಚಿತ್ರವನ್ನು ಅರ್ಥ ಮಾಡಿಕೊಂಡು ಅಥಿ ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇಂದಿರಾ ಮತ್ತು ಪಂಡರಿ ದಂಪತಿಗಳು 70ರ ಹರೆಯದಲ್ಲಿ ಗೋವಾ ಪ್ರವಾಸ ನಮಗೆ ಮತ್ತಷ್ಟು ಸಂತಸವನ್ನು ನೀಡಿದೆ ಜೊತೆಗೆ ಹಲವು ಕುಟುಂಬಗಳ ಒಡನಾಟ ಅವರೊಂದಿಗೆ ಆತ್ಮೀಯತೆ ಸಂತಸವನ್ನು ತಂದಿದೆ ಈ ಮೂಲಕ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರಿಗೆ ಧನ್ಯವಾದಗಳು ಅರ್ಪಿಸಲು ಬಯಸುತ್ತೇನೆ ಎಂದರು.

ಎಡಿಟರ್ ಯುಡಿವಿ ವೆಂಕಿ ಕೆಲಸದ ಒತ್ತಡದಲ್ಲಿ ಕುಟುಂಬಕ್ಕೆ ಹೆಚ್ಚು ಒತ್ತುಕೊಡಲು ಸಾಧ್ಯವಾಗಿರಲಿಲ್ಲ ನನ್ನ ಮದುವೆಯಾಗಿ 8 ವರ್ಷಗಳಾದರೂ ಒಮ್ಮೆಯೂ ಪ್ರವಾಸವನ್ನು ಕೈಗೊಳ್ಳಲು ಅವಕಾಶ ಸಿಕ್ಕಿರಲಿಲ್ಲ ಅಥಿ ಚಿತ್ರತಂಡದ ಜೊತೆ ನನ್ನ ಹೆಂಡತಿ ಅಂಜು ಮತ್ತು ಮಗನೊಂದಿಗೆ ಕಳೆದ ಈ ಮೂರು ದಿನ ಸುಂದರ ನೆನಪುಗಳನ್ನು ಕಟ್ಟಿಕೊಟ್ಟಿದೆ. ನನ್ನ ಮಡದಿಯ ಮುಖದಲ್ಲಿಯೂ ಆ ಸಂತಸವನ್ನು ಕಂಡಿದ್ದೇನೆ.

ಹಣವಿದ್ದರೂ ಇಂತಹ ಪ್ರವಾಸವನ್ನು ಕೈಗೊಳ್ಳಲು ಅವಕಾಶ ಆಗುವುದಿಲ್ಲ. ಯಾಕೆಂದರೆ ಅದಕ್ಕೆ ಬೇಕಾದ ಸಮಯ ಮತ್ತು ಆತ್ಮೀಯ ವಲಯ ದೊರಕುವುದಿಲ್ಲ ಆದರೆ ಆ ಎರಡು ಈ ಬಾರಿ ನನಗೆ ಸಿಕ್ಕಿದೆ ಅದಕ್ಕಾಗಿ ನಾನು ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ರಾಧಿಕಾ ಶಿವಕುಮಾರ್, ಟೆನ್ನಿಸ್ ಇವಾಂಜಲೀ, ಸಿದ್ದಾರ್ಥ್ ಕಲಾಯಿ ಮತ್ತು ತಂಡದ ಎಸ್ ಆರ್ ಟಿ ತಂತ್ರಜ್ಞಾನ ಕ್ರಿಯೇಟಿವ್ ವಿಜಯ್ ಎಲ್ಲರೂ ಗೋವಾ ಪ್ರವಾಸದಲ್ಲಿ ಭಾಗವಹಿಸಿದ್ದರು.

ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಋತು ಚೈತ್ರ ಅವರು ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ಹಾಗೂ ಧರ್ಮಪತ್ನಿ ಜೊತೆಗಿದ್ದರೆ ಗೋವಾ ಪ್ರವಾಸ ಮತ್ತಷ್ಟು ಸೊಗಸಾಗಿ ಇರುತ್ತಿತ್ತು, ಇದೊಂದು ವಿಭಿನ್ನ ಶೈಲಿಯ ಆಲೋಚನೆ, ಕನ್ನಡ ಚಿತ್ರರಂಗದಲ್ಲಿ ಇಂತಹ ಆಫರ್ ನೀಡಿರುವ ಮೊದಲ ಚಿತ್ರ ಅಥಿ ಐ ಲವ್ ಯು ಆಗಿರುತ್ತದೆ ಮತ್ತು ಆ ಕೀರ್ತಿ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರಿಗೆ ಸಲ್ಲುತ್ತದೆ ಎಂಬುದಾಗಿ ಅವರ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರವಾಸದಕ್ಕೂ ಅಥಿ ಚಿತ್ರದ ಅಥಿರ ಮತ್ತು ವಸಂತ್ ಪಾತ್ರಗಳನ್ನು ಚಿತ್ರದ ಹಲವು ಸನ್ನಿವೇಶಗಳನ್ನು ಡೈಲಾಗ್ ಗಳನ್ನು ನೆನಪಿಸಿಕೊಂಡು ಅವುಗಳನ್ನು ಸಂದರ್ಭಕ್ಕೆ ತಕ್ಕಹಾಗೆ ವ್ಯಕ್ತಪಡಿಸುತ್ತಿದ್ದ ದಂಪತಿಗಳೊಂದಿಗೆ ಪ್ರವಾಸ ಮತ್ತಷ್ಟು ಹಿತವೆನಿಸಿತು ಎಂದು ನಿರ್ದೇಶಕ ಲೋಕೇಂದ್ರೆ ಸೂರ್ಯ ಹೇಳಿಕೊಂಡರು.

ಕೊಟ್ಟ ಮಾತಿನಂತೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸಬೇಕು ಸಿನಿಮಾದಲ್ಲಿ ಚಿನ್ನದ ನಾಣ್ಯವನ್ನು ಕೊಟ್ಟಿದ್ದ ನಿರ್ಮಾಪಕ ಸವೆನ್ ರಾಜ್ ಅಥಿ ಚಿತ್ರದ ಮೂಲಕ ಗೋವಾ ಪ್ರವಾಸವನ್ನು ಪೂರ್ಣಗೊಳಿಸಿದ್ದಾರೆ ಅವರ ನಿರ್ಮಾಣದ ಸಂಸ್ಥೆಯಿಂದ ಯಾವುದೇ ರೀತಿಯ ಆಫರ್ ಗಳು ಅನೌನ್ಸ್ ಆದರೆ ಅವು ಖಂಡಿತ ಪ್ರೇಕ್ಷಕರಿಗೆ ಸಿಗುತ್ತದೆ ಎಂಬುದು ಈ ಮೂಲಕ ಸಾಬೀತಾಗಿದೆ . ಡಿಸೆಂಬರ್ 21ರ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಿದ ಗೋವಾ ಪ್ರವಾಸಿಗರು ನಮ್ಮೊಂದಿಗೆ ಈ ಎಲ್ಲ ವಿಷಯಗಳನ್ನು ಹಂಚಿಕೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!