ಈ ವಾರ ‘ಅಸುರ ಸಂಹಾರ’

ಪ್ರದೀಪ್ ಎಸ್. ನಿರ್ದೇಶನ ಅಸುರ ಸಂಹಾರ ಚಿತ್ರ ಈವಾರ ರಿಲೀಸ್ ಆಗುತ್ತಿದೆ. ಹೆಣ್ಣಿನ ಮೇಲೆ ನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಇಂತಹ ವಿಷಯಗಳನ್ನಿಟ್ಟುಕೊಂಡು ನಿರ್ದೇಶಕ ಪ್ರದೀಪ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿದ್ದಾರೆ. ಹರಿಪ್ರಸಾದ್, ಹರ್ಷ ಅರಸು ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಕೂಡ ಮಾಡಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಾಜರಿದ್ದು ಮಾಹಿತಿಗಳನ್ನು ಹಂಚಿಕೊAಡಿತು. ನಿರ್ದೇಶಕ ಪ್ರದೀಪ್ ಮಾತನಾಡಿ ಅತ್ಯಾಚಾರಕ್ಕೆ ಸಂಬಧಪಟ್ಟ ಕಥೆ ಈ ಚಿತ್ರದಲ್ಲಿರುವುದರಿಂದ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

 

ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪದ್ಧತಿ ಜಾರಿಯಾಗಬೇಕು. ಸಡಿಲ ನೀತಿಯನ್ನು ಕೈಬಿಡಬೇಕು ಎಂದು ಹೇಳಿದರು. ೧೦ಕ್ಕೂ ಹೆಚ್ಚು ಸೀರಿಯಲ್‌ಗಳಿಗೆ ಅಸೋಸಿಯೇಟ್ ನಿರ್ದೇಶಕರಾಗಿದ್ದ ಪ್ರದೀಪ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ನಿರ್ಮಾಪಕ ಹಾಗೂ ನಾಯಕ ಹರ್ಷ ಅರಸ್ ಮಾತನಾಡುತ್ತಾ ಮೂಲತಃ ನಾನು ಬಿಸಿನೆಸ್ ಮ್ಯಾನ್. ಒಳ್ಳೆಯ ಸಿನಿಮಾ ಮಾಡುವ  ಇತ್ತು. ಪ್ರದೀಪ್ ನನ್ನ ಸ್ನೇಹಿತ. ಅವರು ಬಂದು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು.

ನಟ ಧರ್ಮಣ್ಣ ಈ ಚಿತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು. ಒಂದು ಸ್ಟಿಲ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಚಿತ್ರದ ನಾಯಕಿಯಾಗಿ ಹರ್ಷಲ ಹನಿ ಅಭಿನಯಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಲೋಕಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಮಾಜಕ್ಕೆ ಅಗತ್ಯವಾಗಿರುವ ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಾಯಕಿಯ ತಂಗಿಯ ಪಾತ್ರ ಮಾಡಿರುವ ದೀಪಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಳನಾಯಕನಾಗಿ ಕಾಣಿಸಿಕೊಂಡಿರುವ ಶಿವು ಬಾಲಾಜಿ, ವಿನಯ್, ರವಿ, ಕೂಡಾ ಹಾಜರಿದ್ದರು.

This Article Has 2 Comments
  1. Pingback: Best Roof Guy Campbell CA

  2. Pingback: cara daftar polsuspas

Leave a Reply

Your email address will not be published. Required fields are marked *

Translate »
error: Content is protected !!