ಹುಲಿ ಉಗುರು ಪ್ರಕರಣ : ಸಂಕಷ್ಟದಲ್ಲಿ ದರ್ಶನ್, ಜಗ್ಗೇಶ್, ಮುನಿರತ್ನ?

ಹುಲಿ ಉಗುರನ್ನು ಆಭರಣವಾಗಿ ಧರಿಸಿದ ಕಾರಣಕ್ಕೆ ಬಂಧನಕ್ಕೆ ಒಳಗಾದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಪ್ರಕರಣದ ಬೆನ್ನಲ್ಲೇ ನಟರಾದ ದರ್ಶನ್ ತೂಗುದೀಪ್, ಜಗ್ಗೇಶ್, ನಿರ್ಮಾಪಕ ಮುನಿರತ್ನ ಸಂಕಷ್ಟಕ್ಕೆ ಒಳಗಾಗಿದ್ದು ಬಂಧನದ ಭೀತಿಗೆ ಒಳಗಾಗಿದ್ದಾರೆ.

ವರ್ತೂರು ಸಂತೋಷ್ ಅವರನ್ನು ಹುಲಿ ಉಗುರನ್ನು ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆ ಬಿಗ್ ಬಾಸ್ ಮನೆಯಿಂದ ಬಂಧಿಸಿದ ಬಳಿಕ ಸ್ಯಾಂಡಲ್ ವುಡ್ ನ ಕೆಲವರ ಎದೆಯಲ್ಲಿ ನಡುಕ ಉಂಟಾಗಿದೆ. ಪ್ರಾಣಿ ಪ್ರೇಮಿ ಆಗಿರುವ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದ ದರ್ಶನ್, ಜಗ್ಗೇಶ್, ಮುನಿರತ್ನ, ವಿನಯ್ ಗುರೂಜಿ ಅವರ ಮೇಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸತೊಡಗಿದ್ದಾರೆ.

ದರ್ಶನ್ ತೂಗುದೀಪ್ ಅವರು ಹುಲಿ ಉಗುರು ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ದರ್ಶನ್ ಅವರು ಈ ಹಿಂದೆ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಕೃಷಿ ಇಲಾಖೆಯ ರಾಯಭಾರಿಯಾಗಿಯೂ ಗಮನ ಸೆಳೆದಿದ್ದರು. ಈಗ ಅವರ ಮೇಲೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ. ಇದು ದರ್ಶನ್ ಅವರಿಗೆ ಸಂಕಷ್ಟವನ್ನು ಉಂಟು ಮಾಡಿದೆ.

ಇದೆ ವೇಳೆ ಜಗ್ಗೇಶ್ ಅವರು ಈ ಹಿಂದೆ ಹುಲಿ ಉಗುರು ಇರುವ ಆಭರಣ ಧರಿಸಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸಂದರ್ಶನದಲ್ಲಿ ಜಗ್ಗೇಶ್ ರವರು, ನಾನು ಹುಲಿಯಂತೆ ಬಾಳಬೇಕು ಎನ್ನುವ ಕಾರಣಕ್ಕೆ ನನ್ನ ತಾಯಿ ನನಗೆ ಒರಿಜಿನಲ್ ಹುಲಿ ಉಗುರು ಕಟ್ಟಿಸಿಕೊಟ್ಟಿದ್ದರು ಎಂದಿದ್ದಾರೆ. ಈಗ ಈ ಕಾರಣದಿಂದ ಜಗ್ಗೇಶ್ ಅವರ ಮೇಲೆ ಕಾನೂನು ಕ್ರಮ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದೇ ವೇಳೆ ಮುನಿರತ್ನ ಅವರು ಹುಲಿ ಉಗುರು ಧರಿಸಿರುವ ಪೋಟೋ ಕೂಡ ವೈರಲ್ ಆಗಿದೆ. ಮಾಜಿ ಸಚಿವರ ಮೇಲೆ ಅರಣ್ಯ ಇಲಾಖೆಯಿಂದ ಕಾನೂನು ಕ್ರಮ ಆಗುತ್ತದೆಯೇ ಎನ್ನುವ ಕುತೂಹಲ ಉಂಟಾಗಿದೆ.

ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ, ಸಾರ್ವಜನಿಕರು ಈ ಮೂವರು ಸೆಲೆಬ್ರಿಟಿಗಳ ವಿಚಾರವನ್ನು ಮುನ್ನೆಲೆಗೆ ತಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ವರ್ತೂರು ಸಂತೋಷ್ ಅವರ ಮೇಲೆ ಕೈಗೊಂಡ ಕ್ರಮವನ್ನು ಅರಣ್ಯ ಇಲಾಖೆ ದರ್ಶನ್, ಜಗ್ಗೇಶ್, ಮುನಿರತ್ನ, ವಿನಯ ಗುರೂಜಿ ಮೇಲೆ ಕೈಗೊಳ್ಳಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!