‘ಅರಿಹ’ ಸಿನಿಮಾ ಮುಹೂರ್ತ

ಯುವಸಿನಿಮೋತ್ಸಾಹಿಗಳ ಪಡೆಯೊಂದು ಸೇರಿ ತಯಾರಿಸ್ತಿರುವ ಅರಿಹ ಸಿನಿಮಾದ ಮುಹೂರ್ತ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಇವತ್ತು ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಆದರ್ಶ್ ಈಶ್ವರಪ್ಪ ಚಿತ್ರಕ್ಕೆ ಕ್ಲಾಪ್ ಮಾಡಿದ್ದು, ಹಿರಿಯ ನಟಿ ಭವ್ಯ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಈ ಹಿಂದೆ ಹಲವು ಕಿರುಚಿತ್ರ ನಿರ್ದೇಶನ ಮಾಡಿರುವ ಮೋಹನ್ ಕುಮಾರ್ ಹೆಚ್ ಸಾರಥ್ಯದಲ್ಲಿ ಅರಿಹ ಸಿನಿಮಾ ಮೂಡಿ ಬರ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದ್ದು, ಎಂಪಿ ಪ್ರೊಡಕ್ಷನ್ ಅಡಿಯಲ್ಲಿ ಸಿ.ಪಿ.ಆರ್.ಗೌಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಅರಿಹ ಸಿನಿಮಾದಲ್ಲಿ ಶ್ರೀ- ಕಾಜಲ್ ಕುಂದರ್ ಜೋಡಿ

ಕಿರುತೆರೆ ಮೂಲಕ ಬೆಳ್ಳಿತೆರೆ ಬಾನಂಗಳ ಪ್ರವೇಶಿಸಿ ಪ್ರತಿಭಾನ್ವಿತ ನಾಯಕ ನಟ, ಇರುವುದೆಲ್ಲವ ಬಿಟ್ಟು , ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಖ್ಯಾತಿಯ ಶ್ರೀ ನಾಯಕನಾಗಿ ನಟಿಸ್ತಿದ್ದು, ಶ್ರೀಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸುತ್ತಿದ್ದಾರೆ. ಕಮರೊಟ್ಟು ಚೆಕ್ ಪೋಸ್ಟ್, ಭೈರವ, ಒಲವೇ ಮಂದಾರ-2, ಚಿ.ತು.ಯುವಕರ ಸಂಘ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸನತ್ ಅರಿಹ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶೋಭರಾಜ್, ಶಶಿರಾಜ್, ಆರ್ ಜೆ ವಿಕ್ಕಿ, ಅಶೋಕ್ ಶರ್ಮಾ, ಶ್ವೇತಾ ಆರ್ ಪ್ರಸಾದ್, ಧನುಶ್ರೀ, ವೈನ್ ಸ್ಟೋರ್ ರಘುಗೌಡ, ಅನಘ ಸಾಗರ್, ಹರ್ಷಿತಾ ಸೇರಿದಂತೆ ಇತರೆ ತಾರಾಬಳಗ ಸಿನಿಮಾದಲ್ಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!