Anirudh: ನನ್ನ ಅನ್ನ ಕಿತ್ತುಕೊಳ್ಳಲು ಯತ್ನಿಸಿದರು ಎಂದ ಅನಿರುದ್ದ್

ಜೊತೆ ಜೊತೆಯಲಿ ಧಾರಾವಾಹಿ ತಂಡ ನನ್ನನ್ನು ಕಿರುತೆರೆಯಿಂದ ಬ್ಯಾನ್ ಮಾಡಲು ಹೋಗಿ ನನ್ನ ಅನ್ನ ಕಿತ್ತುಕೊಳ್ಳಲು ಯತ್ನ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, ಜೊತೆ ಜೊತೆಯಲಿ ಧಾರಾವಾಹಿ ತಂಡದವರು ನಾನೇ ಧಾರಾವಾಹಿಗೆ ಬೇಕು ಎಂದು ಹೇಳಿದರು. ಬಳಿಕ ನಾನು ಇಲ್ಲದೆ ಸೀರಿಯಲ್ ಮಾಡುತ್ತೇವೆ ಎಂದು ಮಾತನಾಡಿದ್ದು ನನ್ನ ಜೀವನದಲ್ಲಿ ಮರೆಯಲಾರದ ನಾವು ಉಂಟು ಮಾಡಿತು. ಅ ತಂಡ ನನ್ನ ಬಳಿ ಚರ್ಚೆ ಮಾಡದೆ ಮಾಧ್ಯಮಗಳಿಗೆ ಹೋಗಿ ನೋವು ಕೊಟ್ಟರು ಎಂದು ಹೇಳಿದ್ದಾರೆ.

ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರಬಂದ ಸಂದರ್ಭದಲ್ಲಿ ನಾನು ತುಂಬಾ ನೋವನ್ನು ಅನುಭವಿಸಿದೆ. ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ರೀತಿ ಆಯಿತು. ಆ ಸಂದರ್ಭದಲ್ಲಿ ನನ್ನ ಕುಟುಂಬ ತುಂಬಾ ಬೆಂಬಲವಾಗಿ ಎಂದು ಅವರು ತಿಳಿಸಿದರು.

ನಾನು ಸೀರಿಯಲ್ ನಲ್ಲಿ ತುಂಬಾ ಖುಷಿಯಿಂದ ಕೆಲಸ ಮಾಡುತ್ತಿದ್ದೆ. ಸ್ಕ್ರಿಪ್ಟ್ ಚೆನ್ನಾಗಿ ಕೊಡಿ ಎಂದು ಹೇಳಿದ್ದಕ್ಕೆ ನನಗೆ ಈ ರೀತಿಯ ಶಿಕ್ಷೆ ಕೊಟ್ಟರು. ಈಗ ನೋಡಿದರೆ ಧಾರಾವಾಹಿಗೆ ಸರಿಯಾದ ಅಂತ್ಯ ಸಿಗಲೇ ಇಲ್ಲ. ಎಷ್ಟು ಅಭಿಮಾನಿಗಳು ನನ್ನ ಮನೆ ಹತ್ತಿರ ಬಂದು ಕಣ್ಣೀರು ಹಾಕಿದ್ದಾರೆ. ಯಾಕೆ ಹೀಗಾಯ್ತು ಎಂದು ಗೋಳಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಥರದ ನೋವು ಯಾರಿಗೂ ಆಗಬಾರದು. ನಾನು ಮಾಡದ ತಪ್ಪಿಗೆ ಎಲ್ಲವನ್ನು ಅನುಭವಿಸಿದೆ ಮತ್ತು ಸಹಿಸಿಕೊಂಡೆ. ಆ ವ್ಯಕ್ತಿ ಈಗ ನನ್ನ ಮುಖವನ್ನು ಕೂಡ ನೋಡುತ್ತಿಲ್ಲ ಎಂದು ಅನಿರುದ್ದ್ ತಮಗೆ ಎದುರಾದ ಪರಿಸ್ಥಿತಿಯನ್ನು ಮುಂದಿಟ್ಟರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!