ಬಡವರಿಗೆ ಊಟ ಬಡಿಸಿದ ನಟಿ ರಾಗಿಣಿ

ಇದನ್ನು ಗಮನಿಸಿದ ಬಹಳಷ್ಟು ಚಿತ್ರೋದ್ಯಮದ ನಟ, ನಟಿಯರು ಊಟಕ್ಕೂ ಇಲ್ಲದೆ ನರಳಾಡುವವರಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ನಟಿ ರಾಗಿಣಿ ಕೂಡ ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆ ಕೋಡಿ ಸಮೀಪದ ಗುಡಿಸಲುಗಳಲ್ಲಿ ಇರುವ ಬಡವರಿಗೆ ಊಟವನ್ನು ವಿತರಿಸಿದರು.

ಒಂದೊತ್ತು ಊಟಕ್ಕೆ ಪರದಾಡುವ ಬಡವರು ಈ ಅನ್ನವನ್ನು ಪಡೆದು ಸಂತೃಪ್ತರಾದರು. ಇದಲ್ಲದೆ ನಟಿ ರಾಗಿಣಿ ಬನಶಂಕರಿ ಪೊಲೀಸ್ ಸ್ಟೇಷನ್ ಸಿಬ್ಬಂದಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ಮಧ್ಯಾಹ್ನದ ಊಟವನ್ನು ಕೂಡ ಮಾಡಿದ್ದಾರೆ.

ನಟಿ ರಾಗಿಣಿ ಬಡವರಿಗೆ ಊಟವನ್ನು ನೀಡಿ ಮಾನವೀಯತೆ ಮೆರೆದರೆ, ಮತ್ತೊಂದೆಡೆ ಪೊಲೀಸರ ಸೇವೆಯನ್ನು ಕೊಂಡಾಡಿ ಅವರೊಟ್ಟಿಗೆ ಊಟವನ್ನು ಮಾಡಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ಒಂದು ಸೇವೆಗೆ ಗೆಳೆಯ ಮಯೂರ್ ಹಾಗೂ ಅವರ ಸ್ನೇಹಿತರು ಕೂಡ ನಟಿ ರಾಗಿಣಿಗೆ ಸಾಥ್ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!