‘ಜಗತ್ತಿಗೆ ಗುಡ್​ ಬೈ’; ಎಂದು ಪೋಸ್ಟ​ ಮಾಡಿದ ಬೆನ್ನಲ್ಲೇ ನಾನು ಸೇಫ್ ಎಂದ ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ!

ಜಯಶ್ರೀಗೆ ಕರೆ ಮಾಡಿದರೂ ಯಾರೊಬ್ಬರ ಕರೆಯನ್ನೂ ಅವರು ಸ್ವೀಕರಿಸಿರಲಿಲ್ಲ. ಇದು ಸಾಕಷ್ಟು ಆತಂಕ ಮೂಡಿಸಿತ್ತು. ಅವರಿಗಾಗಿ,  ಕುಟುಂಬದವರು, ಸ್ನೇಹಿತರು ಹುಡುಕುತ್ತಿದ್ದರು. ಇದಾದ ಬೆನ್ನಲ್ಲೇ ಹಳೆಯ ಪೋಸ್ಟ್​ ಡಿಲೀಟ್​ ಮಾಡಿ ಹೊಸ ಪೋಸ್ಟ್​ ಹಾಕಿದ್ದಾರೆ.

ಸ್ಯಾಂಡಲ್​ವುಡ್​ ನಟಿ ಜಯಶ್ರೀ ರಾಮಯ್ಯ ಅವರು ಮುಂಜಾನೆ, ನಾನು ಎಲ್ಲವನ್ನೂ ತೊರೆಯುತ್ತೇನೆ ಎಂದು ಹಾಕಿದ್ದ ಪೋಸ್ಟ್​ ಭಾರೀ ಆತಂಕ ಮೂಡಿಸಿತ್ತು. ಈಗ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದು, ನಾನು ಸೇಫ್​ ಆಗಿದ್ದೇನೆ ಎಂದಿದ್ದಾರೆ.

ಜಯಶ್ರೀ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ನಿನ್ನೆ ಅವರನ್ನು ಜಯ ನಗರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಧ್ಯರಾತ್ರಿ ಅವರ ಕೆಲ ಸಂಬಂಧಿಕರು ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ ಕಾರಣ, ಅವರನ್ನು ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿದ್ದರು ಎನ್ನಲಾಗಿದೆ. ಆಸ್ಪತ್ರೆ ಪಾರ್ಕಿಂಗ್​ನಲ್ಲಿ ಕೆಲ ಹೊತ್ತು ನಿಂತಿದ್ದ ಜಯಶ್ರೀ, ಅಲ್ಲಿಂದ ಹೊರಬಂದು ಫೇಸ್ ಬುಕ್ ನಲ್ಲಿ ಐ ಕ್ವಿಟ್​ ಎಂದು ಪೋಸ್ಟ್ ಮಾಡಿದ್ದರು.ಈ ವೇಳೆ ಅವರಿಗೆ ಅನೇಕರು ಕರೆ ಮಾಡಿದರೂ ಯಾರೊಬ್ಬರ ಕರೆಯನ್ನೂ ಅವರು ಸ್ವೀಕರಿಸಿರಲಿಲ್ಲ. ಇದು ಸಾಕಷ್ಟು ಆತಂಕ ಮೂಡಿಸಿತ್ತು. ಅವರಿಗಾಗಿ,  ಕುಟುಂಬದವರು, ಸ್ನೇಹಿತರು ಹುಡುಕಿದ್ದರು. ಇದಾದ ಬೆನ್ನಲ್ಲೇ ಜಯಶ್ರೀ ಹಳೆಯ ಪೋಸ್ಟ್​ ಡಿಲೀಟ್​ ಮಾಡಿ ಹೊಸ ಪೋಸ್ಟ್​ ಹಾಕಿದ್ದಾರೆ. ಅದರಲ್ಲಿ ತಾವು ಸೇಫ್​ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಅವರ ಪೋಸ್ಟ್​​ ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮುಂಜಾನೆ ಪೋಸ್ಟ್​ ಮಾಡಿದ್ದ ನಟಿ ಜಯಶ್ರೀ ನನಗೆ ಈ ಜಗತ್ತು ಸಾಕಾಗಿದೆ. ನಾನು ಎಲ್ಲವನ್ನೂ ತೊರೆಯುತ್ತೇನೆ ಎಂದು ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಅವರ ಪೋಸ್ಟ್​ನ ಕಮೆಂಟ್​ ಬಾಕ್ಸ್​ನಲ್ಲಿ ಕಮೆಂಟ್​ಗಳ ಸುರಿಮಳೆಯೇ ಹರಿದು ಬಂದಿತ್ತು. ದುಡುಕಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಅನೇಕರು ಕಿವಿಮಾತು ಹೇಳಿದ್ದರು. ಅಲ್ಲದೆ, ಕೆಲವರು ದೂರವಾಣಿ ಕರೆ ಮಾಡಿದ್ದೇನೆ ಆದರೆ, ಅವರು ಸ್ವೀಕರಿಸುತ್ತಿಲ್ಲ ಎಂದು ಕಮೆಂಟ್​ ಬಾಕ್ಸ್​ನಲ್ಲಿ ಉಲ್ಲೇಖಿಸಿದ್ದರು. ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು.

ಇದಾದ ಬೆನ್ನಲ್ಲೇ ಜಯಶ್ರೀ ಹಳೆಯ ಪೋಸ್ಟ್​ ಡಿಲೀಟ್​ ಮಾಡಿ ಹೊಸ ಪೋಸ್ಟ್​ ಹಾಕಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

This Article Has 3 Comments
  1. Pingback: Sexual abuse of LGBT prisoners

Leave a Reply

Your email address will not be published. Required fields are marked *

Translate »
error: Content is protected !!