ನಟಿ ಜಯಂತಿ ನಿಧನಕ್ಕೆ ಗಣ್ಯರ ಕಂಬನಿ

ಇಂದು ಮುಂಜಾನೆ ಅಗಲಿದ ಕನ್ನಡದ ಹಿರಿಯ ನಟಿ ಜಯಂತಿ ಅವರಿಗೆ ಕನ್ನಡ ಚಿತ್ರ ರಂಗ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸಿಎಂ ಬಿ ಎಸ್ ಯಡಿಯೂರಪ್ಪ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಜಯಂತಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ನಿಧನ ಆದ ಜಯಂತಿ ಅವರಿಗೆ ಕನ್ನಡ ಚಿತ್ರರಂಗದ ಕಲಾವಿದರು ಕಂಬನಿ ಹಾಕಿದ್ದಾರೆ.

“ಭಾರತೀಯ ಚಿತ್ರರಂಗಕ್ಕೆ ಜಯಂತಿ ಅವರ ಕೊಡುಗೆ ಅಪಾರ” ಎಂದು ನಟ ದರ್ಶನ್ ಟ್ವೀಟ್ ಮಾಡಿ ಹೇಳಿದ್ದಾರೆ.

“ನೀವು ಎಂದೆಂದೂ ಎಲ್ಲ ಕಲಾವಿದರಿಗೂ ಓಬವ್ವನಂತೆ ಉದಾಹರಣೆಯಾಗಿ ನಿಲ್ಲುತ್ತೀರಿ. ನೀವು ಕನ್ನಡ ಚಿತ್ರಾಭಿಮಾನಿಗಳ ಮನಸಲ್ಲಿ ಎಂದೆಂದೂ ಅಮರರಾಗಿರುತ್ತೀರಿ.ನೀವು ಮತ್ತೆ ಹುಟ್ಟಿ ಬರಲೇಬೇಕು” ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

“ಕನ್ನಡ ಚಿತ್ರರಂಗದ ‘ಅಭಿನಯ ಶಾರದೆ’ ಜಯಂತಿ ಅಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ..ಓಂ ಶಾಂತಿ” ಎಂದು ನಟ ಶರಣ್ ಹೇಳಿದ್ದಾರೆ.

“ನಿಮ್ಮ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ನೀವು ಅಜರಾಮಾರ …ಓಂ ಶಾಂತಿ” ಎಂದು ನಟಿ ಅಮೂಲ್ಯ ಕಂಬನಿ ಮಿಡಿದಿದ್ದಾರೆ.

“ಅಭಿನಯ ಶಾರದೆ ಜಯಂತಿ ನೀವು ಚಿತ್ರ ಪ್ರೇಮಿಗಳ ಹೃದಯದಲ್ಲಿ ಎಂದು ಕರಗದ ಆಸ್ತಿ” ಎಂದು ನಟ-ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿದ್ದಾರೆ.

76 ವರ್ಷದ ಜಯಂತಿ ಅವರು ಇತ್ತೀಚಿಗಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೇತರಿಸಿಕೊಂಡಿದ್ದರು. ಜಯಂತಿ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಜಯಂತಿ ಅವರ ಪಾರ್ಥಿವ ಶರೀರ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!