ಕ್ಷೇತ್ರಪತಿ’ ಚಿತ್ರದಲ್ಲಿ ಉತ್ತರ ಕರ್ನಾಟಕ ಸೊಗಡು: ನಟ ನವೀನ್‌ ಶಂಕರ್‌

ಸೈಬರ್ ಥ್ರಿಲ್ಲರ್ ಚಿತ್ರ ‘ಗುಳ್ಟು’ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟ ನವೀನ್ ಶಂಕರ್. ‘ಹೊಂದಿಸಿ ಬರೆಯಿರಿ’ ಹಾಗೂ ‘ಹೊಯ್ಸಳ’ ಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ ನವೀನ್ ಶಂಕರ್. ಸದ್ಯ ನವೀನ್ ಶಂಕರ್ ‘ಕ್ಷೇತ್ರಪತಿ’ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

ಆಗಸ್ಟ್‌ 18ರಂದು ಬಿಡುಗಡೆಗೊಳ್ಳಲಿರುವ ‘ಕ್ಷೇತ್ರಪತಿ‘ ಸಿನಿಮಾ ಉತ್ತರ ಕರ್ನಾಟಕದ ಸೊಗಡನ್ನು, ರೈತರ ಹೋರಾಟದ ಬದುಕನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ’ ಎಂದು ಚಿತ್ರದ ನಾಯಕ ನಟ ನವೀನ್‌ ಶಂಕರ್‌ ಹೇಳಿದರು.

ಚಿತ್ರದ ನಾಯಕಿ ನಟಿ ಅರ್ಚನಾ ಜೋಯಿಸ್ ಹಾಗೂ ‘ಶ್ರೀಕಾಂತ್‌ ಕಟಗಿ ನಿರ್ದೇಶನದ ಚಿತ್ರ ₹ 5 ಕೋಟಿ ಬಜೆಟ್‌ನಲ್ಲಿ ಸಿದ್ಧಗೊಂಡಿದೆ. ರವಿ ಬಸ್ರೂರು ಅವರ ಸಂಗೀತವಿದೆ. ತಂದೆ–ಮಗನ ಕೃಷಿ ಬಾಂಧವ್ಯದ ಕತೆ ಹೇಳುತ್ತಲೇ ಹಲವು ತಿರುವುಗಳನ್ನು ಪಡೆಯುವ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವ ವಿಶ್ವಾಸ ಇದೆ’

‘ಉತ್ತರ ಕರ್ನಾಟಕ ಭಾಗದ ನಿರ್ದೇಶಕರು, ಕಲಾವಿದರು ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದುದು ಕಡಿಮೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಮುಖ್ಯವಾಗಿ ಸಿನಿಮಾ ರಂಗ ಬೆಂಗಳೂರು ಕೇಂದ್ರಿತವಾಗಿರುವುದು ಕಾರಣವಾಗಿರಬಹುದು. ಆದರೆ ಕ್ಷೇತ್ರಪತಿ ಸಿನಿಮಾದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಸಂಚಲನ ಮೂಡುವ ವಿಶ್ವಾಸ ಇದೆ.

‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ನವೀನ್ ಶಂಕರ್‌ ಅವರ ಜತೆಗೆ ನಟಿಸಿದ್ದನ್ನು ತಿಳಿಸಿದ ಅರ್ಚನಾ ಜೋಯಿಸ್‌, ‘ಕ್ಷೇತ್ರಪತಿ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಸಹ ಕಲಾವಿದರಾದ ಹೊಸಪೇಟೆ ಮರಿಯಮ್ಮನಹಳ್ಳಿಯ ಸರದಾರ್‌, ರಾಹುಲ್‌ ಐನಾಪುರ, ಹರ್ಷ ಅರ್ಜುನ್‌ ತಮ್ಮ ಅನುಭವ ಹಂಚಿಕೊಂಡರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!