‘ನಾನೇ ಮುಂದೆ ನಿಂತು ಮದುವೆ ಮಾಡಿಸಿದ್ದೆ’ : ಜಗ್ಗೇಶ್​

ಚಿರಂಜೀವಿ ಸರ್ಜಾರ ಅಂತಿಮ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್​​​, ಚಿರು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಈ ಸಾವು ನ್ಯಾಯವೇ ಎಂದು ದೇವರಿಗೆ ಪ್ರಶ್ನೆ ಹಾಕಿದ್ದಾರೆ

ಅಂತಿಮ ದರ್ಶನ ಪಡೆದು ನಂತರ ಮಾಧ್ಯಮದವರ ಜೊತೆ ಮಾತನಾಡಿದ ಜಗ್ಗೇಶ್​​​, ಚಿರು ಸಾವಿನ ವಿಚಾರವನ್ನು ಕೇಳಿದ ತಕ್ಷಣ ಇಲ್ಲಿಗೆ ಆಗಮಿಸಿದೆ. ಈ ಸುದ್ದಿಯನ್ನು ನನ್ನ ಡ್ರೈವರ್​​ ತಿಳಿಸಿರುವುದಾಗಿಯೂ ಹೇಳಿದರು. ಇದೇ ವೇಳೆ ಮೇಘನಾ ಮತ್ತು ಜಿರು ಮದುವೆ ಬಗ್ಗೆ ಮಾತನಾಡಿದ ಜಗ್ಗೇಶ್​​, ಮೇಘನಾರನ್ನು ತುಂಬಾ ಇಷ್ಟ ಪಡುತ್ತಿದ್ದ. ನಾನೇ ಈ ಇಬ್ಬರ ಕುಟುಂಬಗಳನ್ನು ಒಪ್ಪಿಸಿದೆ. ಅಂದು ಇವರ ಮದುವೆ ಮಾಡಿಸಿ ಇಂದು ಚಿರು ಆತ್ಮಕ್ಕೆ ಶಾಂತಿ ಕೋರಲು ಹಿಂಜರಿಕೆಯಾಗುತ್ತಿದೆ ಎಂದರು.

ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಟ್ವೀಟ್​​ ಮಾಡಿರುವ ನಟ ಜಗ್ಗೇಶ್​​​, ನಂಬಲಾಗುತ್ತಿಲ್ಲಾ.. ಹೇಳಲಾಗದ ನೋವು.. ಏನಾಗುತ್ತಿದೆ ನನ್ನ ಚಿತ್ರರಂಗಕ್ಕೆ.. ಅನ್ಯರ ಸಂತೋಷಕ್ಕೆ ನಟಿಸಿ ಬದುಕುವ ಜನ್ಮ ಕಲಾಬದುಕು.. ಯಾವ ತಪ್ಪಿಗೆ ಈ ಶಿಕ್ಷೆ..! ನಿನ್ನ ಆತ್ಮಕ್ಕೆ ಶಾಂತಿ ಕೋರಲು ಒಪ್ಪುತ್ತಿಲ್ಲಾ ನನ್ನಮನಸ್ಸು.. ದೇವರೆ ಈ ಸಾವು ನ್ಯಾಯವೆ! ಎಂದು ಬರೆದಿದ್ದಾರೆ.

https://www.facebook.com/iamjaggesh/photos/a.165948963591465/1407454992774183/?type=3

Be the first to comment

Leave a Reply

Your email address will not be published. Required fields are marked *

Translate »
error: Content is protected !!