ಜಗ್ಗೇಶ್ ಜೊತೆ ನಟಿಸಿದ್ದು ಅದೃಷ್ಟ: ಅದಿತಿ

ತೋತಾಪುರಿ ಸಿನಿಮಾದಲ್ಲಿ ನಾನು ಜಗ್ಗೇಶ್‌ ಅವರ ಜೊತೆ ನಟಿಸಿದ್ದೇನೆ. ಅಂಥ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ಸಿಗುವುದೇ ಅದೃಷ್ಟ ಎಂದು ನಾಯಕ ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.

ಜಗ್ಗೇಶ್‌, ಶಿವಣ್ಣ, ರವಿಚಂದ್ರನ್‌ ಮೊದಲಾದವರ ಜೊತೆಗೆ ನಟಿಸೋಕೆ ಅವಕಾಶ ಸಿಗಲಿ ಎಂದು ನನ್ನಂಥ ಕಲಾವಿದರು ಹಂಬಲಿಸುತ್ತಾರೆ ಎಂದಿದ್ದಾರೆ.

ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅಷ್ಟಾಗಿ ಡಬಲ್‌ ಮೀನಿಂಗ್‌ ಮಾತುಗಳಿಲ್ಲ. ಮೂರ್ನಾಲ್ಕು ಕಡೆ ಆ ಥರದ ಮಾತು ಬರುತ್ತದೆ. ಆದರೆ ಬೇರೆ ಆ್ಯಕ್ಟರ್‌ಗಳಿಗೆಲ್ಲ ಈ ಥರದ ಸಂಭಾಷಣೆ ಇದೆ. ಚಿತ್ರದ ಟ್ರೇಲರ್‌ ನೋಡಿ ಬಹಳ ಜನ ಮೆಚ್ಚಿಕೊಂಡು ಮಾತಾಡಿದರು. ಕೆಲವೊಬ್ಬರು ಹೀಗಳಿಕೆಯ ಮಾತುಗಳನ್ನೂ ಹೇಳಿದರು. ಸಮಾಜ ಅಂದಮೇಲೆ ಎಲ್ಲಾ ಬಗೆಯ ಜನರೂ ಇರ್ತಾರೆ. ಅವರ ಮಾತನ್ನು ಸಹಜವಾಗಿ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಹಿಂದೂ, ಮುಸ್ಲಿಮ್‌ ಜನರೆಲ್ಲ ಬಂದರೂ ವಿವಾದ ಆಗುವ ಯಾವುದೇ ಸಂಗತಿಗಳಿಲ್ಲ. ಧರ್ಮ, ಜಾತಿ ಹೊರ ಆವರಣಗಳು. ಒಳಗಿಂತ ನಾವೆಲ್ಲ ಮನುಷ್ಯರೇ. ಅದನ್ನು ಸಿನಿಮಾ ಹೇಳುತ್ತದೆ. ಈ ಸಿನಿಮಾದ ಎರಡನೇ ಭಾಗವೂ ಬರ್ತಿರೋದು ಖುಷಿಯ ವಿಚಾರ ಎಂದಿದ್ದಾರೆ.

ಮೊದಲ ಬಾರಿ ನನ್ನ ಹುಡುಗ ಪಾಲ್ಗೊಂಡದ್ದು ‘ತೋತಾಪುರಿ’ ಈವೆಂಟ್‌ನಲ್ಲಿ. ಸಿನಿಮಾದ ನನ್ನ ಪಾತ್ರವನ್ನು ಅವರು ಮೆಚ್ಚಿಕೊಂಡರು. ಮದುವೆ ನಂತರ ಸಿನಿಮಾದಲ್ಲಿ ನಟನೆ ಮಾಡ್ಬೇಕೋ ಬೇಡ್ವೋ ಎನ್ನುವ ಗೊಂದಲದಲ್ಲಿದ್ದೆ. ಅವರು ಪ್ರತಿಭೆಯನ್ನು ಯಾಕೆ ಹತ್ತಿಕ್ಕುತ್ತೀಯಾ ಅಂದರು. ಅವರಷ್ಟು ಹೇಳಿದ ಮೇಲೆ ಕೊನೇ ಉಸಿರಿರೋವರೆಗೂ ನಟಿಸ್ತೀನಿ ಅನ್ನೋ ನಿರ್ಧಾರಕ್ಕೆ ಬಂದೆ. ಎಂಗೇಜ್‌ಮೆಂಟ್‌ ಆದಮೇಲೆ ಸಿನಿಮಾ ಆಫ​ರ್‍ಸ್ ಬರೋದಿಲ್ಲ ಅಂದುಕೊಂಡಿದ್ದೆ. ಹಾಗೆ ಏನೂ ಆಗಿಲ್ಲ. ಈಗ ಒಂದು ವೆಬ್‌ ಸೀರೀಸ್‌ನಲ್ಲಿ ನಟಿಸುತ್ತಿದ್ದೀನಿ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಅದಿತಿ ಶಕೀಲಾ ಬಾನು ಹೆಸರಿನ ಮುಸ್ಲಿಂ ಯುವತಿ ಆಗಿ ನಟಿಸಿದ್ದಾರೆ. ಚಿತ್ರ ಸೆ.30ಕ್ಕೆ ಬಿಡುಗಡೆ ಆಗಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!