ಅಭಿಜಿತ್ ಗೆ ಚಾನ್ಸ್ ನೀಡಿದ ಶಿವಣ್ಣ

ಶಿವಣ್ಣ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ತಮ್ಮ ಮುಂದಿನ ಸಿನಿಮಾ ಘೋಸ್ಟ್ ನಲ್ಲಿ ನಟ ಅಭಿಜಿತ್ ಗೆ ಚಾನ್ಸ್ ನೀಡಿದ್ದಾರೆ.

ಶಿವರಾಜ್ ಕುಮಾರ್ ಇತ್ತೀಚಿಗೆ ಡ್ಯಾನ್ಸ್ ರಿಯಾಲಿಟಿ ಶೋ ಡಿಕೆಡಿಯಲ್ಲಿ ತೀರ್ಪುಗಾರ ಆಗಿದ್ದು, ಈ ವೇಳೆ ಅಭಿಜಿತ್ ಅವರಿಗೆ ಚಾನ್ಸ್ ನೀಡುವುದಾಗಿ ಹೇಳಿದ್ದರು.ಶಿವರಾಜ್​ ಕುಮಾರ್ ಅಭಿನಯದ ಘೋಸ್ಟ್ ಚಿತ್ರಕ್ಕೆ ಮುಹೂರ್ತ ಆಗಿದೆ. ಡೈರೆಕ್ಟರ್ ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ ಅಭಿಜಿತ್​ಗೆ ಒಳ್ಳೆಯ ಪಾತ್ರ ಸಿಕ್ಕಿದೆ.

ಕಳೆದ ಕೆಲ ಸಮಯದಿಂದ ಸಿನಿಮಾ ರಂಗದಿಂದ ದೂರವಿದ್ದ ನಟ ಅಭಿಜಿತ್ ಇದೀಗ ಘೋಸ್ಟ್ ಮೂಲಕ ಮತ್ತೆ ಬಿಗ್ ಸ್ಕ್ರೀನ್ ಗೆ ಮರಳಿದ್ದಾರೆ.

ಘೋಸ್ಟ್ ಬಳಿಕ ಇನ್ನೂ ಎರಡು ಸಿನಿಮಾಗಳಿಗೆ ಶಿವಣ್ಣ ಅಭಿಜಿತ್ ಹೆಸರು ರೆಫರ್ ಮಾಡಿದ್ದಾರೆ. ಈ ಮೂಲಕ ಶಿವರಾಜ್ ಕುಮಾರ್ ಅಭಿಜಿತ್ ಅವರಿಗೆ ಮೂರು ಸಿನಿಮಾದ ಆಫರ್ ಕೊಡಿಸಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಘೋಸ್ಟ್ ಚಿತ್ರಕ್ಕೆ ಶ್ರೀನಿ ನಿರ್ದೇಶನ ಇದೆ. “ಶ್ರೀನಿವಾಸ ಕಲ್ಯಾಣ”, ” ಓಲ್ಡ್ ಮಾಂಕ್” ಸೇರಿದಂತೆ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿ ನಿರ್ದೇಶನದ ಐದನೇ ಚಿತ್ರ “ಘೋಸ್ಟ್” ಆಗಿದೆ. ಚಿತ್ರಕ್ಕೆ ಶ್ರೀನಿ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!