ಮೇ‌ 2ಕ್ಕೆ ‘A for ಆನಂದ್’ ಸಿನಿಮಾ ಮುಹೂರ್ತ

ಶಿವರಾಜ್‌ ಕುಮಾರ್  ನಟಿಸಲಿರುವ ‘A for ಆನಂದ್’ ಚಿತ್ರದ ಮುಹೂರ್ತ ಮೇ‌  2 ರ ಶುಕ್ರವಾರದಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ನಿರ್ದೇಶಕ ಶ್ರೀನಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಶಿವಣ್ಣಗೆ  ಶ್ರೀನಿ ಅವರು ಘೋಸ್ಟ್‌ ಸಿನಿಮಾ ಮಾಡಿದ್ದರು. ಶಿವಣ್ಣನ ಹೋಮ್‌ ಬ್ಯಾನರ್‌ ಗೀತಾ ಪಿಕ್ಚರ್ಸ್‌ ನಡಿ ‘A for ಆನಂದ್’  ನಿರ್ಮಾಣವಾಗಲಿದೆ.

ಮಕ್ಕಳ ದಿನದಂದು ‘ಎ ಫಾರ್ ಆನಂದ್’ ಚಿತ್ರದ ಪೋಸ್ಟರ್ ಬಿಡುಗಡೆಯಾಯಿತು.  ‘A for ಆನಂದ್’  ಚಿತ್ರವು ಒಂದು  ಹಳ್ಳಿಯಲ್ಲಿ ನಡೆಯಲಿದ್ದು, ಅಲ್ಲಿ ಶಿವರಾಜ್‌ಕುಮಾರ್  ಶಿಕ್ಷಕ ಪಾತ್ರ ನಿರ್ವಹಿಸಲಿದ್ದಾರೆ.

“ಈ ಚಿತ್ರವು ಕೇವಲ ಮನರಂಜನೆಗಿಂತ ಹೆಚ್ಚಿನದನ್ನು ನೀಡುತ್ತದೆ. ಇದು ಶಿಕ್ಷಕರ ಪಾತ್ರ ಮತ್ತು ಜೀವನವನ್ನು ರೂಪಿಸುವಲ್ಲಿ ಅವರು ಬೀರುವ ಪ್ರಭಾವವನ್ನು ವೀಕ್ಷಕರು ಮೆಚ್ಚುವಂತೆ ಪ್ರೇರೇಪಿಸುವ ಅಮೂಲ್ಯ ಪಾಠಗಳನ್ನು ಒದಗಿಸುತ್ತದೆ” ಎಂದು ನಿರ್ದೇಶಕ ಶ್ರೀನಿ ಹೇಳುತ್ತಾರೆ.

‘ಎ ಫಾರ್ ಆನಂದ್’ ಚಿತ್ರಕ್ಕೆ ಕಥೆ ಬರೆದಿರುವ ಶ್ರೀನಿ ಚಿತ್ರವನ್ನು ಕುಟುಂಬ ಮನರಂಜನೆಯಾಗಿ ವಿನ್ಯಾಸಗೊಳಿಸಿದ್ದಾರೆ. ಶಿವರಾಜ್‌ಕುಮಾರ್  ಮೊದಲ ಚಿತ್ರದ ಶೀರ್ಷಿಕೆಯೂ ‘ಆನಂದ್’ ಆಗಿತ್ತು.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!