ಸಾವಿತ್ರಿ ಚಿತ್ರಕ್ಕೆ ಚಾಲನೆ

ಇತ್ತೀಚೆಗಷ್ಟೇ ಹಿರಿಯ ನಟಿ ತಾರಾ ಅನುರಾಧ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “ಸಾವಿತ್ರಿ’ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಿತ್ತು. ಬಳಿಕ ಚಿತ್ರದ ಮತ್ತೂಂದು ಪ್ರಮುಖ ಪಾತ್ರಕ್ಕೆ ನಟ ವಿಜಯ ರಾಘವೇಂದ್ರ ಆಯ್ಕೆಯಾಗಿದ್ದರು.

ಇದೀಗ “ಸಾವಿತ್ರಿ’ ಚಿತ್ರದ ಮುಹೂರ್ತವನ್ನು ನೆರವೇರಿಸಿರುವ ಚಿತ್ರತಂಡ, ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. “ಪಿಎನ್‌ಪಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಮೂಲತಃ ಸಾಫ್ಟ್ ವೇರ್‌ ಉದ್ಯೋಗಿಯಾಗಿರುವ ಪ್ರಶಾಂತ್‌ ಕುಮಾರ್‌ (ಹೀಲಲ್ಲಿಗೆ) ನಿರ್ಮಿಸುತ್ತಿರುವ “ಸಾವಿತ್ರಿ’ ಚಿತ್ರ ಸ್ಮಾರ್ಟ್‌ಪೋನ್‌ ಮತ್ತು ಆಧುನಿಕ ತಂತ್ರಜ್ಞಾನ ಮಕ್ಕಳ ಮೇಲೆ ಬೀರುವ ಪರಿಣಾಮಗಳ ಸುತ್ತ ನಡೆಯಲಿದೆ.

ಈ ಹಿಂದೆ “ಉಯ್ಯಾಲೆ’ ಚಿತ್ರವನ್ನು ನಿರ್ದೇಶಿಸಿದ್ದ ಎಸ್‌. ದಿನೇಶ್‌ ಈ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಬೆಂಗಳೂರು ಸುತ್ತಮುತ್ತ ಸುಮಾರು45 ದಿನಗಳಕಾಲ ಚಿತ್ರದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ.

ಇನ್ನು ಈ ಚಿತ್ರಕ್ಕೆ ಚಿತ್ರ ಸಾಹಿತಿ ಹೃದಯ ಶಿವ, ಸಂಭಾಷಣೆ ಮತ್ತು ಗೀತ ರಚನೆಯ ಜೊತೆಗೆ ಮೊದಲ ಬಾರಿಗೆ ಸಂಗೀತವನ್ನೂ ಸಂಯೋಜಿಸುತ್ತಿದ್ದಾರೆ. ಹಿರಿಯ ನಟಿ ತಾರಾ, ವಿಜಯ ರಾಘವೇಂದ್ರ ಅವರೊಂದಿಗೆ ನಟರಾದ ಪ್ರಕಾಶ್‌ ಬೆಳವಾಡಿ, ಸಂಜು ಬಸಯ್ಯ (ಕಾಮಿಡಿ ಕಿಲಾಡಿಗಳು) ,ಬೇಬಿ ಲೈಲಾ, ಪ್ರಮೋದ್‌ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!