ಮರಳಿ ಬಂದ ಸುನೀಲ್ ರಾವ್!

‘ಎಕ್ಸ್ ಕ್ಯೂಸ್ಮಿ’ ಎನ್ನುವ ಯಶಸ್ವಿ ಚಿತ್ರ ನೀಡಿದ್ದಂಥ ಸುನೀಲ್ ರಾವ್ ಇದೀಗ ಹೊಸದೊಂದು ಚಿತ್ರದೊಂದಿಗೆ ವಾಪಾಸಾಗಿದ್ದಾರೆ. ಚಿತ್ರದ ಹೆಸರು ‘ತುರ್ತು ನಿರ್ಗಮನ’.
“ನಟ ರಾಜ್ ಬಿ ಶೆಟ್ಟಿ ಅವರು ನಮ್ಮ ಚಿತ್ರದಲ್ಲಿ ರುವುದು ದೊಡ್ಡ ಶಕ್ತಿ, ನನಗೆ ಇದರಲ್ಲಿ ಸೋಮಾರಿಯ ಪಾತ್ರ ಹಾಗಾಗಿ ನಿರ್ದೇಶಕರು ಹೇಳಿದ ಪ್ರಕಾರ 4 ಕೆಜಿ  ತೂಕ ಹೆಚ್ಚಿಸ್ಕೊಂಡೆ” ಎಂದರು ನಾಯಕ  ಸುನೀಲ್ ರಾವ್. “ಸೋಮಾರಿತನ ಎಲ್ಲರ ಬಾಳಲ್ಲಿ ಬಂದು ಹೋಗುವ ಭಾವ.‌ ನಾಯಕ ಕ್ರಿಕೆಟ್ ಆಡಿ ಸಿನಿಮಾ‌ನೋಡಿ ಟೈಂ‌ಪಾಸ್ ಮಾಡುವ ಯುವಕ. ಆದರೆ ಸಾವು ಆತನನ್ನು ಕಾಡಿದಾಗ ಬದುಕಲು ಮೂರೇ ದಿನ ಇದೆ ಎನ್ನುವಾಗ ಆತ ಏನು ಸಾಧನೆ ಮಾಡುತ್ತಾನೆ ಎಂಬುವುದೇ ಚಿತ್ರದ ಕತೆ ಎಂದು ನಿರ್ದೇಶಕ ಹೇಮಂತ್ ಕುಮಾರ್ ಹೇಳಿದರು.
ನನಗೆ ಬೆಂಗಳೂರಿನ ಕ್ಯಾಬ್ ಚಾಲಕನ ಪಾತ್ರ ಎಂದು ನಟ ರಾಜ್ ಬಿ ಶೆಟ್ಟಿ ಹೇಳಿದರು. ನಟಿ ಸಂಯುಕ್ತ   ಹೆಗ್ಡೆ ಮಾತನಾಡುತ್ತಾ  ಚಿತ್ರದಲ್ಲಿ ನಾನು ಚಿಕ್ಕ ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ ಕೊಡುತ್ತೇನೆ. ಎಲ್ಲರ ಮುಖದಲ್ಲಿ ನಗು ತರಿಸುವಂತಹ ಪಾತ್ರ , ಸಿಂಧು ಎನ್ನುವುದು ನನ್ನ ಪಾತ್ರದ ಹೆಸರು ಎಂದರು.
ಸುಧಾರಾಣಿ ಅವರು ನರ್ಸ್ ಪಾತ್ರ ಮಾಡಿದ್ದು, ಅಚ್ಯುತ್ ಕುಮಾರ್ ಮೇಲ್ ನರ್ಸ್ ಪಾತ್ರ ಮಾಡಿದ್ದಾರೆ. ಅರುಣ್ ಬಾಲರಾಜ್, ಅಮೃತಾ ರಾಮಮೂರ್ತಿ, ನಾಗೇಂದ್ರ ಶಾ, ಹಿತಾ ಚಂದ್ರಶೇಖರ್ ಮೊದಲಾದವರಿದ್ದಾರೆ.
ಸಂಗೀತ ನಿರ್ದೇಶಕ ಧೀರೇಂದ್ರ ದಾಸ್, ಸಾಹಿತ್ಯ ಜಯಂತ್ ಕಾಯ್ಕಿಣಿ, ಧನಂಜಯ್ ರಂಜನ್ ಅವರೊಂದಿಗೆ ಸಹ ನಿರ್ಮಾಪಕ ಶರತ್ ಭಗವಾನ್ ಒಂದು ಹಾಡನ್ನು ಬರೆದಿದ್ದಾರೆ.
ಸೆನ್ಸಾರ್ ಮುಗಿದ ಮೇಲೆ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುತ್ತೇವೆ ಎಂದು ಚಿತ್ರತಂಡ ತಿಳಿಸಿದೆ.
https://youtu.be/xA-NpiT6T5k
This Article Has 2 Comments
  1. Pingback: 꽃계열

  2. Pingback: replica watches

Leave a Reply

Your email address will not be published. Required fields are marked *

Translate »
error: Content is protected !!