ಒಂದು ಶಿಕಾರಿಯ ಕಥೆ ಟ್ರೇಲರ್ ಬಿಡುಗಡೆ

‘ಒಂದು ಶಿಕಾರಿಯ ಕತೆ’ ಚಿತ್ರದ ಟ್ರೇಲರ್ ಲಾಂಚ್ ಸಮಾರಂಭ ಇತ್ತೀಚೆಗೆ ನೆರೆವೇರಿತು. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ಪ್ರದರ್ಶಿಸಲ್ಪಡುತ್ತಿದೆ ಒಂದು ಶಿಕಾರಿಯ ಕಥೆ.
 ಸಿನಿಮಾದ ನಾಯಕಿ ಸಿರಿ ಪ್ರಹ್ಲಾದ್ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತಮ್ಮ ಸಿನಿಮಾ ಆಯ್ಕೆ ಆಗಿರೋದು ಖುಷಿ ಇದೆ ಎಂದರು. ಪಿ.ಯು ಮುಗಿಸಿ ತವರಿಗೆ ಮರಳೋ ಹುಡುಗಿಯ ಕ್ಯಾರೆಕ್ಟರ್ ನಾನು ನಿಭಾಯಿಸುತ್ತಿದ್ದು, ಯಕ್ಷಗಾನ ಪ್ರೇಮಿಯಾಗಿರುತ್ತೇನೆ ಎಂದು ನಾಯಕಿ ಸಿರಿ ಪ್ರಹ್ಲಾದ್ ಹೇಳಿದರು.
ಕಡಿಮೆ ಬಜೆಟ್ ಫಿಲ್ಮ್, ಕಾಡಲ್ಲಿ ನಡೆಯೋ ಶಿಕಾರಿ ಮತ್ತು ಜೀವನದಲ್ಲಿ  ನಡೆಯೋ ಶಿಕಾರಿ ಬಗ್ಗೆ ತೋರಿಸಿದ್ದೇನೆ. ಪಿ.ಶೇಷಾದ್ರಿ ಅವರ ಬಳಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಇದೆ ಎಂದು ನಿರ್ದೇಶಕ ಸಚಿನ್ ಶೆಟ್ಟಿ ಹೇಳಿದರು.
ಸಾಹಿತಿಯ ಪಾತ್ರ ತಮ್ಮದೆಂದು ಪ್ರಮೋದ್ ಶೆಟ್ಟಿ   ಹೇಳಿದರು. ಪ್ರಸಾದ್ ಚೇರ್ಕಾಡಿ ಯಕ್ಷಗಾನ ಕಲಾವಿದನಾಗಿ ನಟಿಸಿರುವುದಾಗಿ, ಹೆಣ್ಣು ಗಂಡು ಪಾತ್ರಗಳನ್ನು ಮಾಡುವ ಕಲಾವಿದನನ್ನು ಕಂಡು ನಾಯಕಿ ಮನಸೋಲುತ್ತಾಳೆ ಹಾಗೂ ವೃತ್ತಿಪರ ಯಕ್ಷಗಾನ ಮೇಳದಲ್ಲಿ ಕಾಣಿಸುವ ಕಲಾವಿದನಾಗಿ ಕಾಣಿಸಿದ್ದೇನೆ ಇದಕ್ಕಾಗಿ 15 ದಿನ ರಿಹರ್ಸಲ್ ಮಾಡಿದ್ದೇನೆ ಎಂದರು.
ಚಿತ್ರತಂಡದ ಪ್ರಾಮಾಣಿಕ ಪ್ರಯತ್ನ ಕ್ಕೆ ಒಳ್ಳೆದಾಗುತ್ತೆ ಎಂದು ಛಾಯಾಗ್ರಾಹಕ ಯೋಗೇಶ್ ಹೇಳಿದರು.ಸಹ ಸಂಗೀತ ನಿರ್ದೇಶಕ ಶ್ಯಾಮ್ ಅವರ ಜೊತೆ ಸೇರಿ ಸನತ್ ಬಳ್ಕೂರ್ ಸಂಗೀತ ನೀಡಿದ್ದಾರೆ. ದೊಡ್ಡ ಬೇಟೆಗಾರನ ಮಗ ಅಹಿಂಸಾವಾದಿ ಯಾಗುತ್ತಾನೆ. ಆತ ಗನ್ ಹಿಡಿಯುವಂಥ ಸ್ಥಿತಿ ಬರುವುದೇ ಈ‌ಸಿನಿಮಾದ ಕಥಾ ಹಂದರ ಎಂದು ಯುವ ನಟ ಅಭಿಮನ್ಯು ಹೇಳಿದರು.
ವಿಶೇಷ ಅತಿಥಿಯಾಗಿ ಕಾರ್ಯಕ್ರನಕ್ಕೆ ಆಗಮಿಸಿದ್ದ ಕುಂದಾಪುರದ ಜನಪ್ರಿಯ ಯಕ್ಷಗಾನ ಕಲಾವಿದ ಸಿದ್ಧಾಪುರದ ಐರ್ ಬೈಲ್ ಆನಂದ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
https://youtu.be/D7bxDmaIO3o
Be the first to comment

Leave a Reply

Your email address will not be published. Required fields are marked *

Translate »
error: Content is protected !!