‘ರಾಜೀವ’ ಚಿತ್ರದ ಟ್ರೇಲರ್ ಹಾಗೂ ಧ್ವನಿಸುರುಳಿ ಬಿಡುಗಡೆ

ಬಂಗಾರದ ಮನುಷ್ಯ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರು ರಾಜೀವರಾಗಿ ಹಳ್ಳಿ ತೊರೆದು ಸಿಟಿಯಲ್ಲಿ ವಾಸಿಸುತ್ತಿದ್ದವರನ್ನು ಮತ್ತೆ ಹಳ್ಳಿಯತ್ತ ಮುಖ ಮಾಡುವಂತೆ ಮಾಡಿದರೆ, ಈಗ ಮಯೂರ್ ಪಟೇಲ್‍ರ ರಾಜೀವ ಚಿತ್ರದಲ್ಲೂ ಕೂಡ ಅದೇ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಮಯೂರ್‍ಪಟೇಲ್‍ಗೆ 3 ಶೇಡ್‍ಗಳಿರುವ ಈ ಚಿತ್ರವನ್ನು ಮಂಜು ನಿರ್ದೇಶಿಸುತ್ತಿದ್ದು ಮೊನ್ನೆ ಈ ಚಿತ್ರದ ಟ್ರೇಲರ್ ಹಾಗೂ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು.ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ ಆದರೆ ಬೆಳೆಸಾಲ ಹಾಗೂ ಸಾಲ ಬಾಧೆಯಿಂದ ದಿನಕ್ಕೊಬ್ಬ ರೈತರಾದರೂ ಆತ್ಮಹತ್ಯೆಗೆ ಶರಣಾಗುತ್ತಾರೆ ಅದೇ ವಿಷಯವನ್ನಿಟ್ಟುಕೊಂಡು ರಾಜೀವ ಚಿತ್ರವನ್ನು ಮಾಡಿದ್ದಾರೆ.

ನಿರ್ದೇಶಕ ಮಂಜು ಮಾತನಾಡಿ, ಒಂದು ಉತ್ತಮ ಸಂದೇಶವಿರುವ ಈ ಚಿತ್ರದ ಷೂಟಿಂಗ್ ಈಗಾಗಲೇ ಮುಗಿದಿದ್ದು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ನಾಯಕ ಐಎಎಸ್ ಅಧಿಕಾರಿಯಾಗಿರುತ್ತಾನೆ, ಒಮ್ಮೆ ಆತ ಹಳ್ಳಿಗೆ ಬಂದಾಗ ಅಲ್ಲಿನ ಕಷ್ಟಗಲನ್ನು ಕಂಡು ಅದನ್ನು ಬದಲಾಯಿಸಬೇಕೆಂದು ನಿರ್ಧಾರಿಸುತ್ತಾನೆ, ಜೊತೆಗೆ ಸಿಟಿಗೆ ಹೋಗಬೇಕೆಂಬುವವರ ಮನಸ್ಸನ್ನು ಪರಿವರ್ತಿಸುವುದರ ಜೊತೆಗೆ ಸಿಟಿಯಲ್ಲಿರುವವರನ್ನು ಹೇಗೆ ಹಳ್ಳಿಗೆ ಕರೆಸಿಕೊಳ್ಳುತ್ತಾನೆ ಎಂಬುದೇ ರಾಜೀವ ಚಿತ್ರದ ಹೈಲೈಟ್ ಎಂದು ಹೇಳಿದರು.

ಈ ಚಿತ್ರದಲ್ಲಿ ಮಯೂರ್‍ಪಟೇಲ್‍ಗೆ ಮೂರು ಶೇಡ್‍ಗಳಿವೆ, 20, 40, 60 ವರ್ಷದವನಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಗಳಲ್ಲಿ ನಟಿಸುವಾಗ ಅವರು ತುಂಬಾ ಶ್ರಮಪಡಬೇಕಾಯಿತು. ಈಗಾಗಲೇ ಚಿತ್ರದ ಎಲ್ಲ ಕೆಲಸಗಳು ಮುಗಿದಿದ್ದು, ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್‍ನಲ್ಲಿ ಇದ್ದೇವೆ ಎಂದು ಹೇಳಿದರು.ನಾಯಕಿಯಾಗಿ ಅಕ್ಷತಾ ನಟಿಸಿದ್ದಾರೆ.

ಈ ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ ನಿರ್ದೇಶನ ಮಾಡಿದ್ದು, ಆನಂದ್ ಇಳಯರಾಜ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ಜಿ.ಎಮ್ . ರಮೇಶ್ ಹಾಗೂ ಕಿರಣ್ .ಕೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ರಾಜೀವ ಚಿತ್ರವನ್ನು ನೋಡಿದ ಮೇಲಾದರೂ ನಗರದಲ್ಲಿರುವ ಮಂದಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತಾದರೆ ಚಿತ್ರತಂಡದ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ.

@Bcinemas.in

This Article Has 2 Comments
  1. Pingback: Buy Sex Toys Online

  2. Pingback: 메이저토토사이트

Leave a Reply

Your email address will not be published. Required fields are marked *

Translate »
error: Content is protected !!