‘ಮೈಸೂರು ಸ್ಯಾಂಡಲ್ ಸೋಪ್ ‘ಗೆಮಾರ್ಕೆಟಿಂಗ್ ಹೆಚ್ಚು ಮಾಡಲು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಆಯ್ಕೆ ಮಾಡಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
‘ಇದೊಂದು ಬ್ಯುಸಿನೆಸ್. ಬ್ಯುಸಿನೆಸ್ಗೆ ಏನು ಬೇಕೋ ಅದನ್ನ ಮಾಡ್ತೀವಿ. 4-5 ನಟಿಯರನ್ನ ನಾವು ಕೇಳಿದ್ವಿ. ಆದರೆ ಯಾರು ಒಪ್ಪಲ್ಲಿಲ್ಲ. ತಮನ್ನಾರನ್ನು ಫೈನಲ್ ಮಾಡಿದ್ವಿ’ ಎಂದರು.
ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದಲ್ಲಿ 18% ಮಾತ್ರ ಮಾರ್ಕೆಟಿಂಗ್ ಇದೆ. ಬೇರೆ ರಾಜ್ಯದಲ್ಲಿ ಜಾಸ್ತಿ ಇದೆ. ಹೀಗಾಗಿ ತಮನ್ನಾ ಆಯ್ಕೆ ಮಾಡಿದ್ದೇವೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗೋ ಪ್ಲ್ಯಾನ್ ನಮಗೆ ಇದೆ. ಅದಕ್ಕಾಗಿ ಬಾಲಿವುಡ್ ನಟಿಯನ್ನು ರಾಯಭಾರಿಯಾಗಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ 2 ವರ್ಷಗಳ ಅವಧಿಗೆ 6.2 ಕೋಟಿ ರೂಪಾಯಿ ನೀಡಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
‘ಮೈಸೂರು ಸ್ಯಾಂಡಲ್ ಸೋಪ್’ಗೆ ಬ್ರ್ಯಾಂಡ್ ಅಂಬಾಸಿಡರ್ ಅಗತ್ಯವಿಲ್ಲ ಎಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸೆಲೆಬ್ರಿಟಿಗಳು ಬಳಸುತ್ತಾರೆ ಎಂಬ ಮಾತ್ರಕ್ಕೆ ಜನರು ವಸ್ತುಗಳನ್ನು ಖರೀದಿಸುವುದಿಲ್ಲ. ನಾವು ಸೋಪ್ ಬಳಸಿದರೆ ನಟಿಯ ರೀತಿ ಆಗುವುದಿಲ್ಲ ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ. ಜನರು ಅದನ್ನು ಮೆಚ್ಚಿ ಖರೀದಿಸಿ ಬಳಸಬೇಕೆಂದರೆ ವಸ್ತುವಿನ ಗುಣಮಟ್ಟವಿರಬೇಕು. ಆಪಲ್ ಬಹಳ ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಆದರೆ ಅದಕ್ಕೆ ಸಂಭಾವನೆ ನೀಡಿ ನೇಮಿಸಿದ ಬ್ರಾಂಡ್ ಅಂಬಾಸಿಡರ್ ಇರಲಿಲ್ಲ ಎಂದು ಹೇಳಿದ್ದರು.
—-

Be the first to comment