‘ಕೆಜಿಎಫ್ 2’ ಸಿಂಗರ್ ಜೊತೆ ಪ್ರಮೋದ್ ಮರವಂತೆ ಎಂಗೇಜ್ ಮೆಂಟ್

ಕಾಂತಾರ ಸಿನಿಮಾದ  ‘ಸಿಂಗಾರ ಸಿರಿಯೇ’ ಹಾಡನ್ನು ಬರೆದ ರೈಟರ್ ಪ್ರಮೋದ್ ಮರವಂತೆ ‘ಕೆಜಿಎಫ್ 2’ ಚಿತ್ರದ ಹಾಡುಗಾರ್ತಿ ಸುಚೇತ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪ್ರಮೋದ್ ಮರವಂತೆ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆ. ಸದ್ಯದಲ್ಲೇ ಪ್ರಮೋದ್ ಹಾಗೂ ಸುಚೇತ ಹಸೆಮಣೆ ಏರಲಿದ್ದಾರೆ.

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ, ಪ್ರಮೋದ್ ಮರವಂತೆ  ಬರೆದ ‘ಸಿಂಗಾರ ಸಿರಿಯೇ’ ಹಾಡು ಸಾಕಷ್ಟು ಖ್ಯಾತಿ ಗಳಿಸಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!