45 : 45 ಚಿತ್ರಕ್ಕೆ ನಾಯಕಿ ಕೌಸ್ತುಭ ಮಣಿ?

ಅರ್ಜುನ್ ಜನ್ಯ ಅವರ 45 ಚಿತ್ರಕ್ಕೆನಾಯಕಿ ಆಗಿ ನನ್ನರಸಿ ರಾಧೆ ಸೀರಿಯಲ್‌ನ ಕೌಸ್ತುಭ ಮಣಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೌಸ್ತುಭ ಮಣಿ ಈಗಾಗಲೇ ಕನ್ನಡದ ಒಂದು ಚಿತ್ರವನ್ನ ಕೂಡ ಮಾಡಿದ್ದಾರೆ. ರಾಮಾಚಾರಿ 2.0 ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರ ಇನ್ನಷ್ಟೇ ರಿಲೀಸ್ ಆಗಬೇಕಿದೆ.

ಕೌಸ್ತುಭ ಮಣಿ ಟಾಲಿವುಡ್‌ನ ಸೀರಿಯಲ್‌ ನಲ್ಲೂ ಛಾಪು ಮೂಡಿಸಿದ್ದಾರೆ. ಆಗಲೇ ರಾಮಾಚಾರಿ ಚಿತ್ರವೂ ಬಂದಿತ್ತು. ಈ ಚಿತ್ರದ ಮೂಲಕವೇ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟರು.

ಅರ್ಜುನ್ ಜನ್ಯ ಅವರ ಚಿತ್ರದಲ್ಲಿ ಮೂವರು ಸ್ಟಾರ್ ನಟರಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಇಲ್ಲಿ ಅಭಿನಯಿಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಕೌಸ್ತುಭ ಮಣಿ ಜೋಡಿ ಆಗುತ್ತಾರೆ ಅನ್ನುವ ಕುತೂಹಲ ಮೂಡಿದೆ.

ಅರ್ಜುನ್ ಜನ್ಯ ಮೊದಲ ಬಾರಿಗೆ ಡೈರೆಕ್ಷನ್ ಮಾಡುತ್ತಿದ್ದಾರೆ. ಅವರು ಸಾಕಷ್ಟು ತಯಾರಿ ಮಾಡಿಕೊಂಡು 45 ಚಿತ್ರಕ್ಕೆ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!