ರಾಜ್ಯ ಚಲನಚಿತ್ರ ಪ್ರಶಸ್ತಿ

2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ

ನಿರ್ದೇಶಕ ಬಿ ಎಸ್ ಲಿಂಗದೇವರು ನೇತೃತ್ವದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯು 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿದೆ. 2020ರಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಪಡೆದ ಒಟ್ಟು 66 ಸಿನಿಮಾಗಳನ್ನು ವೀಕ್ಷಣೆ ಮಾಡಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಪೃಥ್ವಿ ಕೋಣನೂರು ನಿರ್ದೇಶನ ದ ಪಿಂಕಿ ಎಲ್ಲಿ..? ಸಿನಿಮಾ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ‘ಜಂಟಲ್ ಮ್ಯಾನ್’ ಚಿತ್ರದ ಅಭಿನಯದ ಕ್ಕಾಗಿ ಪ್ರಜ್ವಲ್ ದೇವರಾಜ್ ಅವರಿಗೆ ಇದೇ ಮೊದಲ ಬಾರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಉಳಿದಂತೆ ಯಾರೆಗೆಲ್ಲಾ ಪ್ರಶಸ್ತಿ ಇಲ್ಲಿವೆ :

2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ

  • ಸುಬ್ಬಯ್ಯ ನಾಯ್ಡು ಪ್ರಶಸ್ತಿ (ಅತ್ಯುತ್ತಮ ನಟ) : ಪ್ರಜ್ವಲ್‍ ದೇವರಾಜ್‍ (ಜಂಟಲ್‌ಮನ್)
  • ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
  • ಅತ್ಯುತ್ತಮ ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ? (ನಿರ್ದೇಶನ: ಪೃಥ್ವಿ ಕೊಣನೂರು)
  • 2ನೇ ಅತ್ಯುತ್ತಮ ಚಿತ್ರ: ವರ್ಣಪಟಲ (ನಿರ್ದೇಶನ: ಚೇತನ್ ಮುಂಡಾಡಿ)
  • 3ನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು (ನಿರ್ದೇಶನ: ಬಾಬು ಈಶ್ವರ್ ಪ್ರಸಾದ್)
  • ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು (ನಿರ್ದೇಶನ: ರಾಮದಾಸ ನಾಯ್ಡು & ಶಿವಧ್ವಜ್ ಶೆಟ್ಟಿ)
  • ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್ (ನಿರ್ದೇಶನ: ಸಂಗಮೇಶ ಎಸ್ ಸಜ್ಜನರ್)
  • ಅತ್ಯುತ್ತಮ ಮಕ್ಕಳ ಚಿತ್ರ: ಪದಕ (ನಿರ್ದೇಶನ: ಆದಿತ್ಯ ಆರ್ ಚಿರಂಜೀವಿ)
  • ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ (ನಿರ್ದೇಶನ: ಗಣೇಶ್‍ ಹೆಗ್ಡೆ)
  • ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಜೀಟಿಗೆ (ತುಳು ಭಾಷೆ, ನಿರ್ದೇಶನ: ಸಂತೋಷ್ ಮಾಡ)
  • ಕೆ ಎಸ್ ಅಶ್ವಥ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟ) : ರಮೇಶ್‍ ಪಂಡಿತ್‍ (ತಲೆದಂಡ)
  • ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತಪುರಾಣ)
  • ಅತ್ಯುತ್ತಮ ಕಥೆ: ಶಶಿಕಾಂತ್‍ ಗಟ್ಟಿ (ರಾಂಚಿ)
  • ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)
  • ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)
  • ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್‍ (ತಲೆದಂಡ)
  • ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್‍ ಬಡೇರಿಯಾ (ಮಾಲ್ಗುಡಿ ಡೇಸ್‍)
  • ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. (ಆ್ಯಕ್ಟ್ 1978)
  • ಅತ್ಯುತ್ತಮ ಬಾಲನಟ: ಅಹಿಲ್‍ ಅನ್ಸಾರಿ (ದಂತ ಪುರಾಣ)
  • ಅತ್ಯುತ್ತಮ ಬಾಲನಟಿ: ಬೇಬಿ ಹಿತೈಷಿ ಪೂಜಾರ್ (ಪಾರು)
  • ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್ (ಬಿಚ್ಚುಗತ್ತಿ)
  • ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (‘ಪರ್ಜನ್ಯ’ ಚಿತ್ರದ ‘ಮೌನವು ಮಾತಾಗಿದೆ’) ಮತ್ತು ಸಚಿನ್‍ ಶೆಟ್ಟಿ ಕುಂಬ್ಳೆ (‘ಈ ಮಣ್ಣು’ ಚಿತ್ರದ ‘ದಾರಿಯೊಂದು ಹುಡುಕುತ್ತಿದೆ’
  • ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ)
  • ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)
  • ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್‍ (ನಟನೆಗಾಗಿ – ಮರಣೋತ್ತರವಾಗಿ),
  • ಅತ್ಯುತ್ತಮ ವಸ್ತ್ರ ವಿನ್ಯಾಸ: ಶ್ರೀ ವಲ್ಲಿ (ಚಿತ್ರ: ಸಾರವಜ್ರ)
  • ಅತ್ಯುತ್ತಮ ಪ್ರಸಾಧನ: ರಮೇಶ್‍ ಬಾಬು (ಚಿತ್ರ: ತಲೆದಂಡ)
  • ಅತ್ಯುತ್ತಮ ಶಬ್ಧಗ್ರಹಣ: ವಿ.ಜಿ. ರಾಜನ್ (ಚಿತ್ರ: ಅಮೃತ್‍ ಅಪಾರ್ಟ್‍ಮೆಂಟ್ಸ್)
  • ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ): ವಿಶ್ವಾಸ್‍ ಕೆ.ಎಸ್ (ವಿಶೇಷಚೇತನ ನಟ – ಅರಬ್ಬೀ)
  • ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕಧಾಮ ಬಾಬು (ಕನ್ನಡಿಗ)
Be the first to comment

Leave a Reply

Your email address will not be published. Required fields are marked *

Translate »
error: Content is protected !!