ಮೋಷನ್​ ಪೋಸ್ಟರ್​ ಮೂಲಕ ಸುಳಿವು ನೀಡಿದ ಚಿತ್ರತಂಡ

ರಾಜ್‌ಗುರು ನಿದೇಶನದ  ನಟ-ನಿರ್ಮಾಪಕ ಗೌರಿ ಶಂಕರ್​ ಇಬ್ಬರು ಕೂಡ  ಮೂಲತಃ ಮಲೆನಾಡಿನವರು. ಬಾಲ್ಯದಿಂದಲೂ ಅವರು ಕೆರೆಬೇಟೆ ನೋಡುತ್ತಾ ಬೆಳೆದಿದ್ದಾರೆ. ಅದನ್ನೇ ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಮೋಷನ್​ ಪೋಸ್ಟರ್​ನಲ್ಲಿ ಸಾಕಷ್ಟು ಅಂಶಗಳನ್ನು ತೋರಿಸಲಾಗಿದೆ. ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ.

ಶೀರ್ಷಿಕೆ ಭಿನ್ನವಾಗಿದ್ದರೆ ಸುಲಭವಾಗಿ ಪ್ರೇಕ್ಷಕರ ಗಮನ ಸೆಳೆಯಬಹುದು. ‘ಕೆರೆಬೇಟೆ’ ಸಿನಿಮಾ  ಆ ಕೆಲಸ ಮಾಡುತ್ತಿದೆ. ಟೈಟಲ್​ನಿಂದ ಈ ಸಿನಿಮಾ ಕುತೂಹಲ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಮೋಷನ್ ಪೋಸ್ಟರ್  ರಿಲೀಸ್​ ಮಾಡುವ ಮೂಲಕ ಪ್ರೇಕ್ಷಕರ ಕೌತುಕವನ್ನು ಹೆಚ್ಚಿಸಲಾಗಿದೆ. ಇದು ಮಲೆನಾಡು ಭಾಗದ ಮೀನು ಬೇಟೆ ಪದ್ಧತಿಯ ಕುರಿತು ನಿರ್ಮಾಣ ಆಗಿರುವ ಸಿನಿಮಾ. ನಿರ್ದೇಶಕ ರಾಜ್​ ಗುರು ಅವರು ಇದೇ ಮೊದಲ ಬಾರಿಗೆ ಮೀನು ಬೇಟೆಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಗೌರಿಶಂಕರ್ ಎಸ್‌ಆರ್‌ಜಿ  ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಗ್ರಾಮೀಣ ಸೊಗಡಿನ ಕಥೆ ಇರುವ ಚಿತ್ರಕ್ಕೆ ಪ್ರೇಕ್ಷಕರು ಮನ ಸೋಲುತ್ತಾರೆ. ‘ಕೆರೇಬೇಟೆ’ ಚಿತ್ರದಲ್ಲೂ ಅಂಥ ಕಹಾನಿ ಇರಲಿದೆ.

ಅಕ್ಟೋಬರ್​ 27ರಂದು ಬಿಡುಗಡೆಯಾಗಿರುವ ‘ಕೆರೆಬೇಟೆ’ ಮೋಷನ್ ಪೋಸ್ಟರ್‌ನಲ್ಲಿ ಹೀರೋ ಗೌರಿಶಂಕರ್ ಕೂಣಿ ಹಿಡಿದು ಕೆರೆಯಲ್ಲಿ ಮೀನು ಬೇಟೆ ಆಡುತ್ತಿರುವ ದೃಶ್ಯ ಇದೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಅವರು ರಾ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗೌರಿ ಶಂಕರ್​ ಅವರ ಹಿಂದೆ ಜನರ ದೊಡ್ಡ ಗುಂಪು ಇದೆ. ಮೀನು ಬೇಟೆಯ ಕಥೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿಸುವ ರೀತಿಯ ಈ ಪೋಸ್ಟರ್​ ಮೂಡಿಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!